

ಉಡುಪಿ: ಉಡುಪಿಯ ಮೂಡುನಿಡಂಬೂರು ಗರಡಿ ಬಳಿಯ ಗದ್ದೆಗೆ ನಿನ್ನೆ ಸಂಜೆ ವೇಳೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸುತ್ತಲಿನ ಪ್ರದೇಶ ಸಂಪೂರ್ಣ ಹೊಗೆಯಿಂದ ಆವೃತವಾದ ಘಟನೆ ನಡೆದಿದೆ.
ಸುತ್ತಲೂ ಒಳಚರಂಡಿ ಇದ್ದ ಕಾರಣ ಗದ್ದೆಗೆ ಬೆಂಕಿ ವ್ಯಾಪಿಸಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಆವರಿಸಿದ್ದ ಸ್ಥಳದಲ್ಲಿ ವಿದ್ಯುತ್ ತಂತಿ ಇದ್ದ ಪರಿಣಾಮ ವಿದ್ಯುತ್ ಕಡಿತಗೊಳಿಸಲಾಗಿತ್ತು.
ಇದೇ ರೀತಿ ಮಣಿಪಾಲದ ಎಂಐಟಿ ಬಳಿಯಲ್ಲಿದ್ದ ಕಸದ ರಾಶಿಗೂ ಬೆಂಕಿ ಹತ್ತಿಕೊಂಡಿದ್ದು ಬೆಂಕಿಯನ್ನು ನಂದಿಸಲಾಗಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ.