

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದ ಕನಕ ಗೋಪುರದ ಕೆಳಗೆ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಗೋ ಪೂಜೆಯನ್ನು ಮಾಡಲಾಯಿತು.
ಮಠದ ಪುರೋಹಿತರಾದ ರಾಘವೇಂದ್ರ ಕೊಡಂಚ ಗೋಪೂಜೆಯನ್ನು ನೆರವೇರಿಸಿದರು. ನಂತರ ರಥಬೀದಿಯಲ್ಲಿ ಭವ್ಯ ಗೋಮೆರವಣಿಗೆ ನಡೆಯಿತು. ರಾಜಾಂಗಣದಲ್ಲಿ ಸಾಮೂಹಿಕ ಗೋಪುಜಾ ಕಾರ್ಯಕ್ರಮ ನೆರವೇರಿತು. ನಂತರ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗೋವಿನ ಮಹತ್ವದ ಬಗ್ಗೆ ಅನುಗ್ರಹ ಸಂದೇಶ ನೀಡಿದರು.