ಬಲವಂತವಾಗಿ ಟೆರೇಸ್​ಗೆ ಕರೆದೊಯ್ದ ಎಂದ ಬಾಲಕಿ; ತನ್ನದಲ್ಲದ ತಪ್ಪಿಗೆ ಬಲಿಪಶುವಾದ ಡೆಲಿವರಿ ಬಾಯ್​

ಬೆಂಗಳೂರು: ಡೆಲಿವರಿ ಬಾಯ್​ ತನ್ನನ್ನು ಬಲವಂತವಾಗಿ ಅಪಾರ್ಟ್​ಮೆಂಟ್​ನ ಟೆರೇಸ್​ಗೆ ಕರೆದೊಯ್ದ ಎಂದು 8 ವರ್ಷದ ಬಾಲಕಿ ದೂರಿದ ಬೆನ್ನಲ್ಲೇ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್​​ ಸಿಟಿಯಲ್ಲಿ ನಡೆದಿದೆ.

ಘಟನೆಯೂ ಸೋಮವಾರ ಸಂಜೆ ನಡೆದಿದ್ದು ಕಾಣೆಯಾದ ತಮ್ಮ ಮಗಳನ್ನು ಹುಡುಕುತ್ತಿದ್ದ ಪೋಷಕರಿಗೆ ಆಕೆ ಟೆರೇಸ್​ನಲ್ಲಿರುವುದು ಕಂಡು ಬಂದಿದೆ. ಬಳಿಕ ಪ್ರಶ್ನಿಸಿದಾಗ ಡೆಲಿವರಿ ಬಾಯ್​ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಬಂದಿದಾಗಿ ದೂರಿದ್ದಳು. ಆತನಿಂದ ತಪ್ಪಿಸಿಕೊಳ್ಳಲು ಕೈ ಕಚ್ಚಿದ್ದಾಗಿ ಬಾಲಕಿ ಆಕೆಯ ಪೋಷಕರ ಬಳಿ ಹೇಳಿದ್ದಳು.

ಮನಸ್ಸೋಇಚ್ಛೆ ಹಲ್ಲೆ

ತಮ್ಮ ಮಗಳ ಮಾತನ್ನು ನಂಬಿದ ಪೋಷಕರು ಬಳಿಕ ಅಪಾರ್ಟ್​ಮೆಂಟ್​ ಕಾಂಪೌಂಡ್​ನಲ್ಲಿದ್ದ ಅಸ್ಸಾಂ ಮೂಲದ ಡೆಲಿವರ್​ ಬಾಯ್ ಅಖಿಲ್​​ನನ್ನು ತಡೆದು ನೆರೆಹೊರೆಯವರಿಗೆ ನಡೆದ ವಿಚಾರವನ್ನು ತಿಳಿಸಿ ಯುವಕನ ಮೇಲೆ ಮನಸ್ಸೋಇಚ್ಛೆ ಹಲ್ಲೆ ನಡೆಸಿದ್ಧಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿದಾಗ ದೊಡ್ಡ ಶಾಕ್​ ಒಂದು ಕಾದಿತ್ತು.

ಮೊದಲಿಗೆ ಅಪಾರ್ಟ್​ಮೆಂಟ್​ಗೆ ಆಗಮಿಸಿದ ಪೊಲೀಸರು ಮದ್ಯಪ್ರವೇಶಿಸಿ ಡೆಲಿವರಿ ಬಾಯ್​ನನ್ನು ರಕ್ಷಿಸಿ ಜೀಪ್​ ಹತ್ತಿಸಿದ್ಧಾರೆ. ಬಳಿಕ ಪ್ರಕರಣದ ಕುರಿತು ಬಾಲಕಿಯ ತಂದೆ ಹಾಗೂ ನೆರೆಹೊರೆಯವರನ್ನು ವಿಚಾರಿಸಿ ಮಾಹಿತಿ ಕಲೆ ಹಾಕಿದ್ಧಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ನಿಜವಾದ ವಿಚಾರ ಹೊರಬಂದಿದ್ದು ಬಾಲಕಿಯ ಮುಖವಾಡ ಕಳಚಿ ಬಿದ್ದಿದೆ.

Check Also

ಮಣಿಪಾಲ: ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಲಕ್ಷಾಂತರ ರೂ. ಹಣ ವರ್ಗಾವಣೆ

ಮಣಿಪಾಲ: ವ್ಯಕ್ತಿಯೊಬ್ಬರ ಖಾತೆಯಿಂದ ಮತ್ತೊಂದು ಖಾತೆಗೆ 2,08,004 ರೂ. ಹಣ ವರ್ಗಾವಣೆಗೊಂಡಿರುವ ಘಟನೆ ನಡೆದಿದೆ. ಕಾರ್ಕಳ ಪಳ್ಳಿ ನಿವಾಸಿ ಡಾ| ಗೋಪಿ ನಾಥ್‌ …

Leave a Reply

Your email address will not be published. Required fields are marked *

You cannot copy content of this page.