ಕುಂದಾಪುರ: ಉದ್ಯಮಿ ಸುರೇಂದ್ರ ಶೆಟ್ಟಿಯ ಕೊಲೆ ಯತ್ನ – ಓರ್ವನ ಬಂಧನ, ಇನ್ನೊಬ್ಬನಿಗಾಗಿ ಶೋಧ

ಕುಂದಾಪುರ: ಕುಂದಾಪುರದ ಉದ್ಯಮಿ, ಸಹನಾ ಸಮೂಹ ಸಂಸ್ಥೆಗಳ ಮಾಲೀಕ ಸುರೇಂದ್ರ ಶೆಟ್ಟಿ ಕಾರಿಗೆ ಅಡ್ಡಗಟ್ಟಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಘಟನೆಗೆ ಸಂಬಂಧಿಸಿದ ಆರೋಪಿಗಳಾದ ಎಸ್‌ಎಸ್ಎಸ್ ಟ್ರಾವೆಲ್ಸ್ ಎಂಬ ಸಂಸ್ಥೆಯ ಮಾಲೀಕ ಸತೀಶ್ ಶೆಟ್ಟಿ (53)ಯನ್ನು ಬಂಧಿಸಲಾಗಿದ್ದು, ಆತನ ಪುತ್ರ ಸನ್ನಿಧಿ ಶೆಟ್ಟಿ (24) ತಲೆಮರೆಸಿಕೊಂಡಿದ್ದಾನೆ.

ಘಟನೆಯ ವಿವರ: ಉದ್ಯಮಿ ಸುರೇಂದ್ರ ಶೆಟ್ಟಿ ಪತ್ನಿ ಸಹನಾ ಸುರೇಂದ್ರ ಶೆಟ್ಟಿಯವರು ಕುಂದಾಪುರ ನಗರದ ಎ.ಎಸ್‌ ಟ್ರೇಡರ್‌ ಎಂಬ ಪ್ಲ್ಯಾಟ್ ನಲ್ಲಿ ಮಳೆ ನೀರಿಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರು. ಇದೇ ಸಂದರ್ಭ ಮೊದಲ ಮಹಡಿಯಲ್ಲಿದ್ದ ಆರೋಪಿ ಸತೀಶ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಸುರೇಂದ್ರ ಶೆಟ್ಟಿಗೆ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದ ಎನ್ನಲಾಗಿದೆ. ಬಳಿಕ ಜುಲೈ 7 ರಂದು ಬೆಳಿಗ್ಗೆ ಕುಂದಾಪುರದ ಕೆ.ಎಸ್.ಆರ್.ಟಿ.ಸಿ ಡಿಪ್ಪೋ ಎದುರಿನ ಸರ್ವೀಸ್‌ ರಸ್ತೆಯಲ್ಲಿ ಸುರೇಂದ್ರ ಶೆಟ್ಟಿಯವರ ಕಾರಿಗೆ ಆರೋಪಿಗಳು ಇನ್ನೋವಾ ಕಾರನ್ನು ಅಡ್ಡ ನಿಲ್ಲಿಸಿ ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಲು ಯತ್ನಿಸಿದ್ದು, ಕಾರಿನ ಗ್ಲಾಸ್‌ ಹಾಗೂ ಕಾರಿನ ಡೋರ್ ಅನ್ನು ಜಖಂ ಮಾಡಿ, ಪೋಲೀಸರಿಗೆ ದೂರು ನೀಡಿದ್ದಲ್ಲಿ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಉದ್ಯಮಿ ಸುರೇಂದ್ರ ಶೆಟ್ಟಿ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಸತೀಶ್ ಶೆಟ್ಟಿಯನ್ನು ಬಂಧಿಸಿ‌, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಸತೀಶ್ ಶೆಟ್ಟಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆತನ ಪುತ್ರ ಸನ್ನಿಧಿ ಶೆಟ್ಟಿ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಸತೀಶ್ ಶೆಟ್ಟಿ ಮೇಲೆ ಈ ಹಿಂದೆಯೂ‌ ವಂಚನೆ ಸಹಿತ ಇತರ ಪ್ರಕರಣಗಳ ಬಗ್ಗೆ ದೂರುಗಳಿರುವುದಾಗಿ ತಿಳಿದುಬಂದಿದೆ.

Check Also

ಗುಡ್ ನ್ಯೂಸ್ : ಕೇಂದ್ರ ಸರ್ಕಾರದಿಂದ ಇನ್ಮುಂದೆ ಬಡವರಿಗೆ ಅಕ್ಕಿ ಜೊತೆ ಸಿಗಲಿದೆ 9 ವಸ್ತುಗಳು!

ನವದೆಹಲಿ- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ ನೀಡುತ್ತವೆ. ಲಾನುಭವಿಗಳ ಆಹಾರ ಭದ್ರತೆಗಾಗಿ ಉಚಿತ …

Leave a Reply

Your email address will not be published. Required fields are marked *

You cannot copy content of this page.