ವೇಣೂರು ದೇವಸ್ಥಾನದಲ್ಲಿ ಇಂದು ಸಂಜೆ ದಕ್ಷಯಜ್ಞ ತಾಳಮದ್ದಲೆ ಸಂಪೂರ್ಣ ಮಹಿಳೆಯರೇ ಹಿಮ್ಮೇಳದ ಪ್ರಪ್ರಥಮ ಪ್ರದರ್ಶನ !!

ವೇಣೂರು, ಎ. 16: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಂದು ಸಂಜೆ ೬ ರಿಂದ ಶ್ರೀ ದುರ್ಗಾಂಭ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಸುರತ್ಕಲ್ ಅವರಿಂದ ಯಕ್ಷಗಾನ ತಾಳಮದ್ದಲೆ ಜರಗಲಿದ್ದು, ಹಿಮ್ಮೇಳದಲ್ಲಿ ಸಂಪೂರ್ಣ ಮಹಿಳೆಯರೇ ಅನ್ನುವುದು ವಿಶೇಷ. ಸಂಪೂರ್ಣ ಮಹಿಳೆಯರೇ ಹಿಮ್ಮೇಳದಲ್ಲಿದ್ದು, ನಮ್ಮ ಪ್ರಥಮ ಪ್ರದರ್ಶನ ಅನ್ನುತ್ತಿವೆ ಯಕ್ಷಗಾನ ಮಂಡಳಿ. ಅಂತು ಯಕ್ಷಪ್ರಿಯರಿಗೆ ಒಂದು ವಿಶೇಷ ರಸದೌತಣ ನೀಡಲು ಯಕ್ಷಗಾನ ಮಂಡಳಿ ಸಜ್ಜಾಗುತ್ತಿದೆ.

Check Also

ರೇಷನ್‌ ಕಾರ್ಡ್‌ ಕಳೆದು ಹೋದರೆ ಚಿಂತೆ ಮಾಡಬೇಡಿ ಹೀಗೆ ಮಾಡಿ

ರೇಷನ್‌ ಕಾರ್ಡ್‌ ಕಳದುಹೋದರೆ ಚಿಂತಿಸಬೇಡಿ. ಸರ್ಕಾರ ನಿಮಗಾಗಿ ಹೊಸ ವ್ಯವಸ್ಥೆಯನ್ನು ಕಲ್ಪಿಸಿದೆ. NFSA ನ ಅಧಿಕೃತ ವೆಬ್‌ಸೈಟ್‌ https: //www.nfsa.gov.in …

Leave a Reply

Your email address will not be published. Required fields are marked *

You cannot copy content of this page.