ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಕಾರ್ಕಳದ ಭುವನೇಂದ್ರ ಕಾಲೇಜು ಸಮೀಪದ ಮನೆಯೊಂದಕ್ಕೆ ತೆಂಗಿನ ಮರ ಬಿದ್ದು ಹಾನಿ ಉಂಟಾದ ಘಟನೆ ಜು.21ರಂದು ನಡೆದಿದೆ.
ಕಾರ್ಕಳ ನಗರದ ಭುವನೇಂದ್ರ ಕಾಲೇಜು ಸಮೀಪದ ನಿವಾಸಿ ಜಯರಾಜ್ ರವರ ಮನೆಗೆ ತೆಂಗಿನ ಮರ ಬಿದ್ದು, ಹಾನಿಯುಂಟಾಗಿದೆ.
ವಾಸದ ಮನೆಗೆ ತೆಂಗಿನಮರ ಮುರಿದು ಬಿದ್ದು ಅಂಶಿಕ ಹಾನಿ ಉಂಟಾಗಿದೆ.ಇದರಿಂದ 50,000 ರೂ. ಅಂದಾಜು ನಷ್ಟ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಆಗಮಿಸಿ ಪರಿಹಾರ ಕಾರ್ಯ ನಡೆಸುತ್ತಿದ್ದಾರೆ.