![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಶಿವಮೊಗ್ಗ: ಪತ್ರಕರ್ತನೋರ್ವನ ವಿರುದ್ಧ ಬ್ಲಾಕ್ ಮೇಲ್ ಪ್ರಕರಣದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತೀಚೆಗೆ ನಡೆದ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ನ ಮೇಲಿನ ಪೊಲೀಸ್ ದಾಳಿಯ ವಿಚಾರದಲ್ಲಿ ಪತ್ರಕರ್ತನೋರ್ವನ ಕೈವಾಡವಿದೆ ಎಂಬ ವಿಷಯ ಹರಿದಾಡಿತ್ತು.
ಆ ವಿಷಯಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೋರ್ವರು ಪತ್ರಕರ್ತನೋರ್ವ ಒಂದು ಲಕ್ಷ ರೂ ಹಣದ ಬೇಡಿಕೆ ಮತ್ತು ತಿಂಗಳಿಗೆ 30 ಸಾವಿರ ರೂ. ಹಣ ನೀಡುವಂತೆ ಒತ್ತಾಯಿಸಿದ್ದು ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಷ್ಮ ಗೌಡ ಎಂಬುವರು ಕಳೆದ ಎರಡು ವರ್ಷದಿಂದ ಉಷ ನರ್ಸಿಂಗ್ ಹೋಂ ಬಳಿಯ ಶಿವಜ್ಯೋತಿ ಕಾಂಪ್ಲೆಕ್ಸ್ ನಲ್ಲಿ ಲುಮಿನಸ್ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದು ಇಲ್ಲಿಗೆ ಭೇಟಿ ಕೊಟ್ಟ ಪೊಲೀಸ್ ವಾರ್ತೆ ಪತ್ರಿಕೆಯ ಸುಭಾಷ್ ಶೆಟ್ಟಿ ಎಂಬುವರು ಪಾರ್ಲರ್ ನಲ್ಲಿದ್ದ ಸಿಬ್ವಂದಿಗಳಿಗೆ ಓನರ್ ಯಾರು ಅವರ ನಂಬರ್ ಕೊಡಿ ರಾಯಲ್ ಆರ್ಚ್ ಬ್ಯೂಟಿ ಪಾರ್ಲರ್ ನ್ನ ರೈಡ್ ಮಾಡಿಸಿದ್ದು ನಾನೆ ಎಂದು ಹೇಳಿರ್ತಾನೆ.
ನಿಮ್ಮ ಮಾಲೀಕರಿಗೆ ಕರೆ ಮಾಡಲು ಹೇಳಿ ಎಂದು ತನ್ನ ನಂಬರ್ ನ್ನೂ ಸಹ ನೀಡಿರುತ್ತಾನೆ. ಬ್ಯೂಟಿ ಪಾರ್ಲರ್ ನ ಮಾಲೀಕರು ಕರೆ ಮಾಡಿದಾಗ ಪೊಲೀಸ್ ವಾರ್ತೆ ಪತ್ರಿಕೆಯವರು ಮಾತನಾಡುವುದು, ನಾಳೆ ರಾಯಲ್ ಆರ್ಕಿಡ್ ನಲ್ಲಿ ಭೇಟಿ ಮಾಡಿ ಎಂದು ತಿಳಿಸಿದ್ದಾನೆ.
ಜೂನ್ 23 ರಂದು ಕರೆ ಮಾಡಿದ ಸುಭಾಶ್ ಶೆಟ್ಟಿ ಒಮ್ಮೆ ಶಿವಪ್ಪ ನಾಯಕ ಪ್ರತಿಮೆ ಬಳಿ ಎಂದು ಹೇಳಿದರೆ ಮತ್ತೊಮ್ಮೆ ಕರೆ ಮಾಡಿ ಪಿಂಗಾರ ಹೋಟೆಲ್ ಬಳಿ ಬನ್ನಿ ಎಂದು ಕರೆ ಮಾಡಿ ತಿಳಿಸಿರುತ್ತಾನೆ. ಪಿಂಗಾರ ಹೋಟೆಲ್ ಬಳಿ ಭೇಟಿಯಾದಾಗ ಮಾಲೀಕರ ಮೊಬೈಲ್ ಪಡೆದುಕೊಂಡು ರಾಯಲ್ ಆರ್ಚ್ ಸೆಲೂನ್ ರೈಡ್ ಮಾಡಿಸಿದ್ದು ನಾನೇ, ಎಂದವನೆ ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನ ತೋರಿಸಿ ಹೆದರಿಸಿದ್ದಾನೆ.
ಒಂದು ಲಕ್ಷ ರೂ. ಹಣ ಕೊಡಿ, ಜೊತೆಗೆ 30 ಸಾವಿರ ರೂ. ಹಣ ತಿಂಗಳಿಗೆ ಮಾಮೂಲಿ ಕೊಡುವಂತೆ ಬ್ಲಾಕ್ ಮೇಲ್ ಮಾಡಿದ್ದಾನೆ. ಹಣ ಕೊಡದಿದ್ದರೆ ಸಲೂನ್ ನನ್ನ ರೈಡ್ ಮಾಡಿಸುವುದಾಗಿ ಬೆದರಿಸಿದ್ದಾನೆ. ಸೆಲೂನ್ ನಲ್ಲಿ ವೇಶ್ಯವಾಟಿಕೆ ನಡೆಸುತ್ತಿರುವುದಾಗಿ ಬಿಂಬಿಸಿ ನ್ಯೂಸ್ ಪೇಪರ್ ನಲ್ಲಿ ನಿನ್ನ ಫೋಟೊ ಹಾಕಿಸುವುದಾಗಿ ಬೆದರಿಸಿದ್ದಾನೆ.
ಬ್ಲಾಕ್ ಮೇಲ್ ಮಾಡಿದ ಪತ್ರಕರ್ತನ ವಿರುದ್ಧ ನೊಂದ ಮಹಿಳೆ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.