June 3, 2025
WhatsApp Image 2024-11-18 at 5.28.05 PM

ಉಪ್ಪಿನಂಗಡಿ : ಮನೆಗೆ ನುಗ್ಗಿದ ಕಳ್ಳರು ಚಿನಾಭರಣ ವನ್ನು ದೋಚಿ, ಪ್ರಮುಖ ದಾಖಲೆಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ನಡೆದಿದೆ.ಇಚ್ಲಂಪಾಡಿ ಗ್ರಾಮದ ಮಾನಡ್ಕ ಎಂಬಲ್ಲಿನ ಸತೀಶ್ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ.

ಮನೆ ಮಂದಿ ತನ್ನ ಮದುವೆ ಕಾರ್ಯದ ನಿಮಿತ್ತ ಸಂಬಂಧಿಕರ ಮನೆಗೆ ಹೋಗಿದ್ದರೆನ್ನಲಾಗಿದೆ. ರವಿವಾರ ನಸುಕಿನ ವೇಳೆ ಮನೆಯೊಳಗೆ ಬೆಂಕಿ ಉರಿಯುತ್ತಿರುವುದನ್ನು ಕಂಡು ಸತೀಶ್‌ರ ಅಣ್ಣನ ಮಗಳು ಫೋನ್ ಕರೆ ಮಾಡಿ ತಿಳಿಸಿದ್ದು, ಮನೆ ಮಂದಿ ಆಗಮಿಸಿ ನೋಡಿದಾಗ ಆ ವೇಳೆ ಮನೆಯ ಕೋಣೆಯಲ್ಲಿ ಬೆಂಕಿ ಉರಿಯುತ್ತಿದ್ದು ಬಳಿಕ ಪರಿಶೀಲಿಸಿದಾಗ ಮನೆಯ ಹಿಂಬದಿ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಎರಡು ಬಂಗಾರ ಚೈನ್, ಮೂರು ಜೊತೆ ಕಿವಿಯ ಬೆಂಡೋಲೆ,ಸೇರಿದಂತೆ ಸುಮಾರಿ ಒಂದು ಲಕ್ಷ ರೂ. ಮೌಲ್ಯದ ಚಿನಾಭರಣವನ್ನು ಕಳವುಗೈದಿರುವುದು ಹಾಗೂ ಭೂಮಿಯ ದಾಖಲೆಗಳು, ಬ್ಯಾಂಕ್ ದಾಖಲೆಗಳು, ಆಧಾರ್ ಕಾರ್ಡ್, ಅಂಗವಿಕಲ ಕಾರ್ಡ್, ಹಲವು ದಾಖಲೆಗಳನ್ನು ಇರಿಸಲಾಗಿದ್ದ ಕಪಾಟಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>