ಮಂಗಳೂರು: ನಕಲಿ‌ ದಾಖಲೆ ಸೃಷ್ಟಿಸಿ ಪ್ಲ್ಯಾಟ್ ಮಾರಾಟದ ಆರೋಪ – ಪ್ರಕರಣ ದಾಖಲು

ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಫ್ಲ್ಯಾಟ್ ಮಾರಾಟ ಮಾಡಿರುವ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೀತ್ ಶರಣ್, ಶೆರ್ವಿನ್ ಡಿಸೋಜ, ಶಂತನು ಮಲ್ನಾಡರ್, ಸುಕೇತ ಎಂಬ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕಂಪೆನಿಯ ಆಸ್ತಿಯಂತೆ ನಗರದ ಮಲ್ಲಿಕಟ್ಟೆ, ಕದ್ರಿ ಕಂಬಳದಲ್ಲಿ ಫ್ಲಾಟ್‌ಗಳಿದೆ. ಈ ಕಂಪೆನಿಯ ಅಧಿಕಾರಿ ರವೀಂದ್ರ ಬೆಳೆಯೂರು ಸಾಲಗಳನ್ನು ಪರಿಶೀಲಿಸುವ ವೇಳೆ ಫ್ಲಾಟ್‌ಗಳನ್ನು ನೀತ್ ಶರಣ್ ಎಂಬಾತ ಉಳಿದ ಮೂವರೊಂದಿಗೆ ಸೇರಿಕೊಂಡು ಮಾರಾಟ ಮಾಡಿರುವುದು ತಿಳಿದು ಬಂದಿದೆ. ಇವರು 2022ರ ಮಾರ್ಚ್‌ನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಮದಾಸ್ ಮತ್ತು ಶ್ರೀಲತಾ ಎಂಬವರಿಗೆ ಮಾರಾಟ ಮಾಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಉಡುಪಿ: ಸುಶ್ಮಿತಾ ‌ಆಚಾರ್ಯಗೆ ಮಿಸ್ ಕೋಸ್ಟಲ್ – 2024 ಕಿರೀಟ

ಉಡುಪಿ: ಸುಶ್ಮಿತಾ ಆಚಾರ್ಯ ಅವರು ಈ ವರ್ಷದ ಮಿಸ್ ಕೋಸ್ಟಲ್ – 2024 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಉಡುಪಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. …

Leave a Reply

Your email address will not be published. Required fields are marked *

You cannot copy content of this page.