March 6, 2026
WhatsApp Image 2023-02-17 at 6.43.53 PM

ಹಾಸನ: ಭಾರತ ಸಾಂಸ್ಕೃತಿಕ ದೇಶ ಭವ್ಯ ಪರಂಪರೆ ಹೊಂದಿರುವ ದೇಶ ದೈವರಾದನೇ ನಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಭೂಮಿಗಾಳಿ ಆಕಾಶ ಪ್ರತಿಯೊಂದು ಕೂಡ ನಾವು ದೈವವನ್ನು ಕಾಣುತ್ತೇವೆ ಅದೇ ರೀತಿ ನಮ್ಮಲ್ಲಿ ದೇವಾಲಯಗಳು ಅತಿ ಹೆಚ್ಚಾಗಿ ಇದ್ದು ಹಲವಾರು ಪವಾಡಗಳನ್ನು ನಾವು ಕಾಣುತ್ತಿದ್ದೇವೆ. ವೈಜ್ಞಾನಿಕತೆಯಲ್ಲಿ ಅತಿ ಎತ್ತರಕ್ಕೆ ಬೆಳೆಯುತ್ತಿರುವ ಭಾರತದಲ್ಲಿ ಹಿಂದೂ ಕೂಡ ದೈವ ನಂಬಿಕೆ ಇದೆ ಎಂಬುದಕ್ಕೆ ಸಾಕ್ಷಿಯೇ ಈ ಚೌಡೇಶ್ವರಿ ಶಕ್ತಿ ಮಠ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದಿಂದ ಸರಿಸುಮಾರು 13 ಕಿಲೋ ಮೀಟರ್ ದೂರದಲ್ಲಿ ಇರುವ ಹೊಸಕೊಪ್ಪಲು ಗ್ರಾಮದಲ್ಲಿ ನೆಲೆಸಿರುವ ತಾಯಿ ಚೌಡೇಶ್ವರಿ ಹಲವಾರು ಪವಾಡಗಳಿಗೆ ಸಾಕ್ಷಿಯಾಗಿದ್ದಾಳೆ. ಸರಿ ಸುಮಾರು 450ಕ್ಕೂ ಹಿಂದಿನ ಹಳೆಯ ಇತಿಹಾಸವನ್ನು ಹೊಂದಿರುವ ಈ ತಾಯಿ ರಾಜ್ಯದ ಹಲವಾರು ಭಾಗಗಳಿಂದ ಬರುವ ಭಕ್ತರ ಕಷ್ಟಗಳನ್ನು ತನ್ನ ತ್ರಿಶೂದಲ್ಲಿ ಬರೆದು ತೋರಿಸಿ ಅದಕ್ಕೆ ಪರಿಹಾರವನ್ನು ತಾನೇ ನೀಡುತ್ತಾಳೆ. ನಂಬಿದ ಭಕ್ತರನ್ನು ಎಡಬಡದೆ ಕಾಯುವ ಈ ತಾಯಿ. ಹಿಂದೂ ರಾಜ್ಯದ ಮನೆಮಾತಾಗಿದ್ದಾಳೆ.

ಚನ್ನರಾಯಪಟ್ಟಣದಿಂದ 13 ಕಿಲೋ ಮೀಟರ್ ದೂರದಲ್ಲಿರುವ ಮಟ್ಟನೆವಿಲಿ ಸಮೀಪ ಇರುವ ಹೊಸ ಕಪ್ಪಲು ಎಂಬ ಪುಟ್ಟ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ತಾಯಿ ಅವರ ಶಕ್ತಿ ಮಠ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು ಹಲವಾರು ಭಕ್ತರ ತೊಂದರೆಗಳನ್ನು ನಿವಾರಿಸಿದ್ದಾಳೆ.
ವಿಶೇಷವೆಂದರೆ ತಾಯಿ ಚೌಡೇಶ್ವರಿ ಸಂಯುಕ್ತವಾಗಿ ತಾನೇ ಮೇಲಿದ್ದು ತನ್ನ ತ್ರಿಶೂಲದಿಂದ ಭಕ್ತರ ತೊಂದರೆಯನ್ನು ಬರೆಯುತ್ತಾಳೆ ಅಲ್ಲದೆ ಅದಕ್ಕೆ ಪರಿಹಾರವನ್ನು ಸಹ ನೀಡುತ್ತಾಳೆ ಪ್ರತಿ ಭಾನುವಾರ ಸೋಮವಾರ ಮಂಗಳವಾರ ತಾಯಿಯ ದರ್ಶನ ವಿದ್ದು ಪ್ರಶ್ನೆ ಕೇಳುವ ಭಕ್ತಾದಿಗಳು ಟೋಕನ್ ಪಡೆದು ಪ್ರಶ್ನೆ ಕೇಳಬಹುದು ಒಂದು ದಿನಕ್ಕೆ ಕೇವಲ 60 ಟೋಕನ್ ಗಳನ್ನು ನೀಡುತ್ತಿದ್ದು ನಂತರ ಬರುವ ಭಕ್ತಾದಿಗಳಿಗೆ ಬುಕಿಂಗ್ ವ್ಯವಸ್ಥೆ ಕೂಡ ಇದೆ

About The Author

Leave a Reply

Your email address will not be published. Required fields are marked *

You cannot copy content of this page.