May 30, 2025 5:37:17 PM
WhatsApp Image 2023-11-16 at 3.19.22 PM

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಮಣಿಸಿ ಭಾರತ ತಂಡ ಫೈನಲ್ ಪ್ರವೇಶಿದ್ದು, ಭಾರತೀಯರಲ್ಲಿ ಸಂಭ್ರಮ ಮನೆ ಮಾಡಿದೆ. ಇಡೀ ಭಾರತ ಫೈನಲ್ ಗಾಗಿ ಎದುರು ನೋಡುತ್ತಿದೆ.

ಇದೀಗ ತೆಲುಗಿನ ನಟಿಯೊಬ್ಬರು ವಿಶ್ವಕಪ್ ಫೈನಲ್ ನಲ್ಲಿ ‘ಟೀಮ್ ಇಂಡಿಯಾ’ ಗೆದ್ದರೆ ಬೆತ್ತಲಾಗುವೆ ಎಂದು ಹೇಳಿಕೆ ನೀಡುವ ಮೂಲಕ ವ್ಯಾಪಕ ಸುದ್ದಿಯಾಗಿದ್ದಾರೆ.

 

ವಿಶ್ವಕಪ್ ಫೈನಲ್ ನಲ್ಲಿ ಭಾರತ ಗೆದ್ದರೆ ವಿಶಾಖಪಟ್ಟಣಂ ಸಮುದ್ರದಲ್ಲಿ ಬೆತ್ತಲೆಯಾಗಿ ನಡೆಯುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿಯ ಪೋಸ್ಟ್ ಗೆ ತರಹೇವಾರಿ ಕಮೆಂಟ್ ಗಳು ಬರುತ್ತಿದೆ. ಕೆಲವರು ಇಂಡಿಯಾ ಗ್ಯಾರಂಟಿ ಗೆಲ್ಲುತ್ತದೆ ಎಂದಿದ್ದರೆ, ಇನ್ನೂ ಕೆಲವರು ನೀವು ಕೊಟ್ಟ ಮಾತಿಗೆ ತಪ್ಪಬೇಡಿ ಎಂದಿದ್ದಾರೆ.ಸುಮಾರು 12 ವರ್ಷಗಳ ಹಿಂದೆ ನಟಿ ಪೂನಂ ಪಾಂಡೆ ಈ ತರಹದ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇದೀಗ ನಟಿ ರೇಖಾ ಮತ್ತೆ ಈ ತರಹದ ಹೇಳಿಕೆ ನೀಡಿದ್ದಾರೆ.

ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಮಣಿಸಿ ಭಾರತ ತಂಡ ಫೈನಲ್ ಪ್ರವೇಶಿದ್ದು, ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಡೀ ಭಾರತ ಫೈನಲ್ ಪಂದ್ಯಕ್ಕಾಗಿ ಎದುರು ನೋಡುತ್ತಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>