ಸೌಜನ್ಯ ಅತ್ಯಾಚಾರ, ಕೊಲೆಗಾರರನ್ನು ಗುಂಡು ಹೊಡೆದು ಸಾಯಿಸಿ : ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಕರೆ..!

ಮಂಗಳೂರು : ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಅಪರಾಧಿಗಳು ಯಾರು ಅಂತ ಗೊತ್ತಿದ್ರೆ, ಅವರನ್ನು ಗುಂಡು ಹೊಡೆದು ಸಾಯಿಸಿ ನನ್ನ ಬಳಿಗೆ ಬನ್ನಿ ನಾವು ರಕ್ಷಣೆ ನೀಡ್ತೇವೆಂದು  ಎಂದು ರಾಮಸೇನಾ  ಸ್ಥಾಪಕಧ್ಯಕ್ಷ  ಪ್ರಸಾದ್ ಅತ್ತಾವರ  ಕರೆ ನೀಡಿದ್ದಾರೆ.

ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದ ಪ್ರಸಾದ್ ಅತ್ತಾವರ  ಸೌಜನ್ಯ ಪ್ರಕರಣದ ತನಿಖೆ ಸಂಪೂರ್ಣ ವಿಫಲವಾಗಿದೆ.

ಅಮಾಯಕ ಸಂತೋಷ್ ಅನ್ನುವ ವ್ಯಕ್ತಿ 11ವರ್ಷ ಜೈಲು ಸೇರಿ ಇದೀಗ ಖುಲಾಸೆಗೊಂಡು ಹೊರ ಬಂದಿದ್ದರೂ ಅವನ ಜೀವನವೇ ನಾಶವಾಗಿದೆ.

ಇವತ್ತು ಹೋರಾಟ ಪ್ರತಿಭಟನೆಯೆಂದು ಕೈಕಟ್ಟಿ ಕುಳಿತುಕೊಳ್ಳುವ ಸಮಯವಲ್ಲ.

ಒಂದು ಕಡೆ  ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ.ಇನ್ನೊಂದು ಕಡೆಯಿಂದ ಸಂಘಟನೆಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿದೆ.

ನಮಗೆ ವೀರೇಂದ್ರ ಹೆಗ್ಗಡೆಯವರ  ಮಾತು ಬೇಕಿತ್ತು . ಅವರು ಸೌಜನ್ಯ ನ ಪರವಾಗಿ ನಿಂತು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೀಗೆ ಆಗುತ್ತಿದ್ದರೆ ನಾವು ಏನು ಮಾಡುತ್ತಿದ್ದೆವು.

ಸೌಜನ್ಯನ ಅತ್ಯಾಚಾರ, ಕೊಲೆ ಮಾಡಿದವರು ಅವರಿಗೆ ಗೊತ್ತಿದ್ರೆ ಅಂತಹ ವ್ಯಕ್ತಿ ಗಳಿದ್ದರೆ ಅವರಿಗೆ ಗುಂಡು ಹೊಡೆದು ನನ್ನ ಬಳಿ ಬನ್ನಿ ರಾಮಸೇನೆ ಅವರ ಬೆಂಬಲಿಕ್ಕಿದೆ ಎಂದಿದ್ದಾರೆ.

Check Also

ಸಂಸದ ಕೋಟ ಶ್ರೀನಿವಾಸ ಪೂಜಾರಿ ತಾಯಿ ಲಚ್ಚಿ ಪೂಜಾರ್ತಿ ನಿಧನ!

ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ಲಚ್ಚಿ ಪೂಜಾರ್ತಿ (97) …

Leave a Reply

Your email address will not be published. Required fields are marked *

You cannot copy content of this page.