May 22, 2025 1:31:25 PM
WhatsApp Image 2023-12-06 at 10.12.34 AM

ವಿಟ್ಲ : ಹಳೇ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಸೇರಿಕೊಂಡು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ್ದು, ಇಬ್ಬರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಬೈದುಲ್ಲಾ (35) ಅವರು ಹಲ್ಲೆಗೊಳಗಾದ ವ್ಯಕ್ತಿ. ಉಬೈದುಲ್ಲ ಅವರು ಕೊಳ್ಳಾಡು ಗ್ರಾಮದ ಸಾಲೆತ್ತೂರು ಮೈದಾನದ ಬಳಿ ತನ್ನ ಬಂಧುಗಳೊಂದಿಗೆ ತೆರಳುತ್ತಿದ್ದಾಗ, ಅಲ್ಲಿದ್ದ ಆರೋಪಿಗಳಾದ ಅಬ್ದುಲ್ ಖಾದರ್ ಮತ್ತು ಬಶೀರ್ ರವರು ಹಳೆ ದ್ವೇಷದಿಂದ ಉಬೈದುಲ್ಲ ಅವರ ಕಾಲರ್‌ ಪಟ್ಟಿಯನ್ನು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ. ಆರೋಪಿಗಳಾದ ಅಬ್ದುಲ್ ಖಾದರ್ ಮತ್ತು ಬಶೀರ್ ಅವರಲ್ಲಿ ತನ್ನ ಮಗನಿಗೆ ಯಾಕೆ ಬೈದು ಹಲ್ಲೆ ಮಾಡಿದ್ದು ಎಂದು ಕೇಳಿದಕ್ಕೆ ಆರೋಪಿ ಬಶೀರನು ಉಬೈದುಲ್ಲ ತಾಯಿಗೂ ಅವ್ಯಾಚವಾಗಿ ಬೈದು, ನಿನ್ನ ಮಗನನ್ನು ಕೊಲ್ಲುತ್ತೇವೆ ಎಂದು ಹೇಳಿ ಮುನ್ನುಗ್ಗಿದ್ದಾರೆ. ಈ ವೇಳೆ ಉಬೈದುಲ್ಲಾ ಪತ್ನಿ ತಾಯಿಗೆ ಹೊಡೆಯುವುದನ್ನು ತಡೆಯಲು ಹೋದಾಗ, ಬಶೀರ್, ಉಬೈದುಲ್ಲಾ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ

About The Author

Leave a Reply

Your email address will not be published. Required fields are marked *

<p>You cannot copy content of this page.</p>