March 23, 2026
WhatsApp Image 2026-02-04 at 9.33.55 AM
ಸುಳ್ಯ: ಸುಳ್ಯ ತಾಲೂಕಿನ ಕಲ್ಲುಗುಂಡಿ ನಿವಾಸಿ ಶ್ರೀಮತಿ ಸಾಹಿತ್ಯಾ ರೈ (27) ಅವರ ಮೇಲೆ ಪತಿ ಹಾಗೂ ಮಾವರು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಸಾಹಿತ್ಯಾ ರೈ ಅವರ ಪತಿ ಯಶಸ್ವಿ ರೈ (30) ಹಾಗೂ ಮಾವ ನಿತ್ಯಾನಂದ ರೈ (58) ಇಬ್ಬರೂ ಸೇರಿ ಮುಖಕ್ಕೆ ಕಚ್ಚಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಸಾಹಿತ್ಯಾ ರೈ ಅವರು ಈ ವಿಚಾರವನ್ನು ತಕ್ಷಣವೇ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದಲ್ಲಿರುವ ತಮ್ಮ ಪೋಷಕರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ರಾತ್ರಿಯೇ ಕಾರಿನಲ್ಲಿ ಸುಳ್ಯಕ್ಕೆ ತೆರಳಿ ಗಾಯಾಳು ಸಾಹಿತ್ಯಾ ರೈ ಹಾಗೂ ಅವರ ಮಗುವನ್ನು ಕರೆತಂದು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.