May 20, 2025
WhatsApp Image 2023-12-03 at 9.15.45 AM

ಮಂಗಳೂರು: ಕರಾವಳಿಗರಿಗೆ ಸಂತಸದ ಸುದ್ದಿಯೊಂದಿದೆ. ಡಿಸೆಂಬರ್‌ ಅಂತ್ಯದಲ್ಲಿ ಮಂಗಳೂರು ಸೆಂಟ್ರಲ್ ಮತ್ತು ಮಡಗಾಂವ್ ನಡುವೆ ಕರ್ನಾಟಕ ಕರಾವಳಿಯ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಸಾಧ್ಯತೆಯಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕಳೆದ ವರ್ಷ ರೈಲ್ವೆ ಸಚಿವಾಲಯ ಮಂಜೂರು ಮಾಡಿದ ಮಂಗಳೂರು ಸೆಂಟ್ರಲ್‌ನಿಂದ ಭಾವನಗರ ಮತ್ತು ರಾಮೇಶ್ವರಂಗೆ ಎರಡು ಸಾಪ್ತಾಹಿಕ ರೈಲುಗಳನ್ನು ಸಹ ಈ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು. ಪಾಲಕ್ಕಾಡ್ ವಿಭಾಗೀಯ ರೈಲ್ವೇ ಮ್ಯಾನೇಜರ್ ಅರುಣ್ ಕುಮಾರ್ ಚತುರ್ವೇದಿ, ಈ ವಿಭಾಗವು ವಿಸ್ತರಣೆಗಾಗಿ ವೇಳಾಪಟ್ಟಿ ಮತ್ತು ವಿಧಾನಗಳನ್ನು ರೂಪಿಸುತ್ತಿದೆ ಎಂದು ಹೇಳಿದರು.

About The Author

Leave a Reply

Your email address will not be published. Required fields are marked *

<p>You cannot copy content of this page.</p>