December 6, 2025
WhatsApp Image 2025-06-02 at 9.16.19 AM

ಮೂಡುಬಿದಿರೆ ವಾಲ್ಪಾಡಿ ಗ್ರಾಮದ ಜೋಗೊಟ್ಟು ಪಡ್ಡಾಯಿಮಜಲು ಬಳಿಯ ಕಿಂಡಿ ಅಣೆಕಟ್ಟಿನ ಹಲಗೆಗಳನ್ನು ತೆಗೆಯುವಾಗ ಫ್ಲ್ಯಾಬ್ ಕುಸಿದು ನೀರಿಗೆ ಬಿದ್ದು ಕೊಚ್ಚಿ ಹೋದ  ಗುರುಪ್ರಸಾದ್ ಭಟ್ (38) ಅವರ ಶವ ರವಿವಾರ ಅಪರಾಹ್ನ  ಶಿರ್ತಾಡಿ ಸೇತುವೆ ಬಳಿ ಪತ್ತೆಯಾಗಿದೆ.

 

 

ಅಗ್ನಿಶಾಮಕ ದಳದವರು, ಸ್ಥಳೀಯರು ಬೋಟ್ ಬಳಸಿ ಹುಡುಕಾಟ ನಡೆಸಿದ್ದು, ಫಲಕಾರಿಯಾಗದೆ ಮುಳುಗು ತಜ್ಞ ಈಶ್ವರ್ ಮಲ್ಪೆ ಸಂಗಡಿಗರು  ರವಿವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಪಡ್ಡಾಯಿ ಮಜಲುನಿಂದ ಸುಮಾರು 3 ಕಿ.ಮೀ. ದೂರದಲ್ಲಿ ಶಿರ್ತಾಡಿ ಕಜೆ ಬಳಿ ಮೃತ ದೇಹವನ್ನು ಮೇಲಕ್ಕೆತ್ತು ವಲ್ಲಿ ಸಫಲರಾದರು.

45 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈ ಕಿಂಡಿ ಅಣೆಕಟ್ಟು ತೀರಾ ದುರ್ಬಲವಾಗಿದ್ದು ಕೆಲವೆಡೆ ಕಬ್ಬಿಣದ ಸರಳನ್ನು ಬಳಸದಿರುವುದೇ ಸ್ಲ್ಯಾಬ್   ಕುಸಿಯಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.