

ಮಂಗಳೂರು: ಸುರತ್ಕಲ್ ಸಮೀಪ ವಿಶ್ವ ಹಿಂದೂ ಪರಿಷತ್ ಕಾಟಿಪಳ್ಳ ಘಟಕದ ಕಾರ್ಯಕರ್ತರು ಅಕ್ರಮ ಗೋ ಮಾಂಸ ಅಡ್ಡೆಗೆ ದಾಳಿ ನಡೆಸಿದ ಘಟನೆ ಸುರತ್ಕಲ್ ನ ಕಾಟಿಪಳ್ಳ ಸಮೀಪ ಇಂದು ಮುಂಜಾನೆ ಸಂಭವಿಸಿದೆ.
ಟೀಮ್ ಕರ್ಣ ಹಾಗೂ ಬಜರಂಗದಳ ಕಾರ್ಯಕರ್ತರು ಅಕ್ರಮ ಗೋ ಮಾಂಸ ಅಡ್ಡೆಗೆ ಕಾಟಿಪಳ್ಳದಲ್ಲಿ ಇಂದು ಮುಂಜಾನೆ ದಾಳಿ ನಡೆಸಿ ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಕಾರ್ಯಾಚರಣೆ ವೇಳೆ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಬಜರಂಗದಳದ ಕಾಟಿಪಳ್ಳ ಘಟಕದ ಕಾರ್ಯಕರ್ತರು ಗೋ ಮಾತೆ ನಮಗೆ ತಾಯೀಯ ಸ್ವರೂಪ ಇನ್ನಾದರೂ ಗೋ ಹತ್ಯೆಯನ್ನು ನಿಲ್ಲಿಸಿ ಇಲ್ಲದಿದ್ದರೆ ಭಜರಂಗದಳ ಇದಕ್ಕೆ ಸೂಕ್ತ ಉತ್ತರ ಕೊಡಬೇಕಾದಿತ್ತು ಎಂಬ ಎಚ್ಚರಿಕೆ ನೀಡಿದ್ದಾರೆ.