ಉಡುಪಿ : ಅನಾಥ ಗೂಳಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ.!

ಉಡುಪಿ : ಕೃಷ್ಣ ನಗರಿ ಉಡುಪಿಯಲ್ಲಿ ಅನಾಥ ಗೂಳಿ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ನಡದಿದೆ. ಉಡುಪಿ ನಿಟ್ಟೂರಿನ ಕಾಂಚನ ಹುಂಡೈ ಶೋರೂಂ ಬಳಿ ತೀವೃ ರಕ್ತ ಸ್ರಾವವಾಗಿ ಗೂಳಿ  ಬಿದ್ದಿತ್ತು.  ಎರಡೂ ಕಾಲುಗಳನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಪರಾರಿಯಾಗಿದ್ದರು.

ತೀರಾ ಚಿಂತಾಜನಕ ಸ್ಥಿತಿಯಲ್ಲಿದ್ದ ಗೂಳಿಯ ಬಗ್ಗೆ ಮಾಹಿತಿ ಪಡೆದ ಉಡುಪಿ ಸಮಾಜ ಸೇವಕ ನಿತ್ಯಾನಂದ ಅವರ ಮುಂದಾಳತ್ವದಲ್ಲಿ ಸಮಾಜ ಸೇವಕರ ತಂಡ ರಕ್ಷಣೆ ಮಾಡಿದೆ. ಉಡುಪಿ ನಿಟ್ಟೂರಿನ ಕಾಂಚನ ಹುಂಡೈ ಶೋರೂಮ್ ಬಳಿ ಗಂಭೀರಾವಸ್ಥೆಯಲ್ಲಿದ್ದ ಗೂಳಿಯನ್ನು ರಕ್ಷಿಸಲಾಗಿದೆ. ಗೂಳಿಯ ಎರಡು ಕಾಲುಗಳು ಮಾರಕಾಯುಧಗಳಿಂದ ಕತ್ತರಿಸಲ್ಪಟ್ಟಿದ್ದವು. ಗೋಕಳ್ಳರ ಕೃತ್ಯ ಇರಬಹುದೆಂದು ಅವರು ಶಂಕಿಸಿದ್ದಾರೆ. ಪಶುವೈದ್ಯ ಡಾಕ್ಟರ್ ಸಂದೀಪ್ ಕುಮಾರ್ ಚಿಕಿತ್ಸೆ ನೀಡಿದ್ದಾರೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಗೂಳಿ ರಕ್ಷಣಾ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು. ಕಾಂಚನ ಹುಂಡೈ ಶೋರೂಂನ ಸಿಬ್ಬಂದಿಗಳು ಈ ಕಾರ್ಯಾಚರಣೆಗೆ ತಮ್ಮ ನೆರವು ನೀಡಿದರು.

Check Also

ಮಂಗಳೂರು: ಸ್ಕಿಡ್ಡಾಗಿ ಬಿದ್ದ ಸ್ಕೂಟರ್ – ಯುವಕ ಮೃತ್ಯು…!!

ಮಂಗಳೂರು: ನಗರದ ಸಮೀಪ ಯುವಕ ಚಲಾಯಿಸುತ್ತಿದ್ದ ಸ್ಕೂಟರ್ ಗೆ ದನ ಅಡ್ಡ ಬಂದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಯುವಕ …

Leave a Reply

Your email address will not be published. Required fields are marked *

You cannot copy content of this page.