
ದುಷ್ಕರ್ಮಿಗಳ ದಾಳಿಯಿಂದ ಹಲ್ಲೆಗೊಳಗಾಗಿರುವ ಮಂಗಳೂರು ಹೊರವಲಯದ ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಮನೆಗೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಮಂಗಳೂರು ಹೊರವಲಯದ ಬಜಪೆ ಠಾಣಾ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಸಂಚರಿಸಿಸುತ್ತಿದ್ದ ಅಖಿಲೇಶ್ ಅವರ ಮೇಲೆ ವಿನಾಕಾರಣ ಮಾರಕಾಸ್ತ್ರದಿಂದ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಗಾಯಗೊಂಡ ಅಖಿಲೇಶ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಪೂಪಾಡಿಕಲ್ಲಿನಲ್ಲಿರುವ ಅಖಿಲೇಶ್ ಅವರ ಮನೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅಖಿಲೆಶ್ ಅವರ ಮೇಲೆ ತಲವಾರು ದಾಳಿ ನಡೆಸಿದ್ದ ಆರೋಪಿಗಳಾದ ಸಿನಾನ್, ಇರ್ಷಾದ್, ಸುಹೈಲ್ ಹಾಗೂ ನಿಸಾನ್ ಪೊಲೀಸ್ ವಶದಲ್ಲಿದ್ದಾರೆ.
