![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ಮಂಗಳೂರು: ಹುಲಿವೇಷ ಕಲಾವಿದನ ಮೇಲೆ ದೈವ ಆವಾಹನೆಯಾಗಿರುವ ಘಟನೆ ಮಂಗಳೂರಿನ ಬೊಕ್ಕಪಟ್ಣದಲ್ಲಿ ನಡೆದಿದೆ. ಬೊಕ್ಕಪಟ್ಣ ಶಿವ ಫ್ರೆಂಡ್ಸ್ನ ಹುಲಿವೇಷದ ಊದುಪೂಜೆ ನಿನ್ನೆ ಕಾರ್ಯಕ್ರಮ ನಡೆದಿದೆ. ಹುಲಿವೇಷ ಹಾಕುವುದಕ್ಕಿಂತ ಮೊದಲು ದೇವರ ಸೇವೆಯೆಂಬಂತೆ ಈ ಆರಾಧನೆ ನಡೆಯುತ್ತಿದೆ. ಹುಲಿವೇಷ ಬಣ್ಣ ಧಾರಣೆ ಮಾಡದೆ ಹುಲಿವೇಷದ ನರ್ತನ ಸೇವೆ ಇರುತ್ತದೆ. ಈ ವೇಳೆ ಹುಲಿವೇಷ ಕಲಾವಿದನ ಮೇಲೆ ದೈವ ಆವಾಹನೆಯಾಗಿದೆ. ನಟ ರಾಜ್ ಬಿ. ಶೆಟ್ಟಿಯವರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ನಾಲ್ಕೈದು ಮಂದಿ ಹಿಡಿದುಕೊಂಡಿದ್ದರೂ ಆವಾಹನೆಯಾಗಿದ್ದ ಯುವಕ ಕೊಸರಾಡುತ್ತಿರುವುದನ್ನು ನೋಡುವಾಗ ಮೈಜುಮ್ಮೆನಿಸುತ್ತದೆ. ಬಳಿಕ ಹಿರಿಯೊಬ್ಬರು ಸಾಂತ್ವನ ಮಾಡಿ ನೀರು ಚಿಮುಕಿಸಿದ ನಂತರ ಆತ ಸಹಜ ಸ್ಥಿತಿಗೆ ಬಂದಿದ್ದಾನೆ. ಕಳೆದ ಬಾರಿ ಉಡುಪಿಯಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು.