March 21, 2026
WhatsApp Image 2026-03-21 at 5.40.53 PM

ಸುಳ್ಯ: ಗೂನಡ್ಕದ ಕೊಠಡಿ ಒಂದರಲ್ಲಿ ಕಲ್ಲಡ್ಕದ ಯುವಕನೊಬ್ಬ ನೇಣು ಬಿಗಿದು ಆತ್ಮ*ಹ*ತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮೃತನನ್ನು ಕಲ್ಲಡ್ಕದ ತಿಲಕ್‌ರಾಜ್ ಎಂದು ಗುರುತಿಸಲಾಗಿದೆ.

ತಿಲಕ್ ಅವರು ನಿನ್ನೆ ಸಂಜೆ ಕಾರಿನಲ್ಲಿ ಮಡಿಕೇರಿಗೆಂದು ಕಲ್ಲಡ್ಕದಿಂದ ಹೊರಟಿದ್ದರು. ಸಂಜೆ ವೇಳೆ ಗೂನಡ್ಕ ಎಂಬಲ್ಲಿ ರೂಮ್ ಮಾಡಿಕೊಂಡಿದ್ದರು. ಅಲ್ಲೇ ಅವರು ಆತ್ಮ*ಹ*ತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

ಸಮಾಜ ಸೇವಕ ತಾಜ್ ಟರ್ಲಿ ಎಂಬವರು ಮಾಡಿನ ಮೂಲಕ ರೂಮಿನೊಳಕ್ಕೆ ಪ್ರವೇಶಿಸಿ ತಿಲಕ್ ಮೃತದೇಹವನ್ನು ಹೊರತೆಗೆಯುವ ಕೆಲಸ ಮಾಡಿದ್ದಾರೆ. ಆತ್ಮ*ಹ*ತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸುಳ್ಯದ ಸರ್ಕಾರ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.