

ಉಡುಪಿ: ಆಟೋರಿಕ್ಷಾ ಪಲ್ಟಿಯಾಗಿ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡ ಘಟನೆ ನಗರದಲ್ಲಿ ಸಂಭವಿಸಿದೆ. ಉಡುಪಿಯ ಜಾಕೀರ್ ಹುಸೇನ್ ಅವರು ರಿಕ್ಷಾದಲ್ಲಿ ಅಂಬಾಗಿಲು ಕಡೆಯಿಂದ ಅಂಬಲಪಾಡಿ ಕಡೆಗೆ ಹೋಗುತ್ತಿರುವಾಗ ಚಾಲಕ ಸುಧಾಕರ ಅವರು ರಿಕ್ಷಾವನ್ನು ಅತಿವೇಗದಿಂದ ಚಲಾಯಿಸಿದ ಪರಿಣಾಮ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮವಾಗಿ ರಿಕ್ಷಾದಲ್ಲಿದ್ದ ಮಹಮ್ಮದ್ ರಯಾನ್ ಹುಸೇನ್, ರಪಾನ್ ಜಾಕೀರ್ ಹುಸೇನ್ ಹಾಗೂ ಲೋನ್ಜಕೀರ್ ಹುಸೇನ್ ಗಾಯಗೊಂಡಿದ್ದಾರೆ.