March 22, 2026
WhatsApp Image 2025-10-13 at 3.37.17 PM

ಬೈಂದೂರಿನ ಗೊಳಿಹೋಳೆ ಗ್ರಾಮದ ಬಡ್ಕಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮ  ಕೆಂಪುಕಲ್ಲು ಗಣಿಕಾರಿಕೆ  ನಡೆಸುತ್ತಿದ್ದ ವೇಳೆ ಬೈಂದೂರು ಪೊಲೀಸರು ದಾಳಿ ನಡೆಸಿದ್ದಾರೆ.

ಕುಂದಾಪುರ ಆಲೂರು ವಾಟೆಕಾಡು ನಿವಾಸಿ ಮನೋಜ ಮೊಗವೀರ(43) ಎಂಬವರು ಪರವಾನಿಗೆ ಇಲ್ಲದೇ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು.

ಬೈಂದೂರು ಪೊಲೀಸ್‌ ಠಾಣಾ ಉಪನಿರೀಕ್ಷಕ ತಿಮ್ಮೇಶ ನೇತೃತ್ವದಲ್ಲಿ ದಾಳಿ ನಡೆಸಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 35,000 ಮೌಲ್ಯದ ಕಲ್ಲು ಕಟ್ಟಿಂಗ್‌ ಮಾಡುವ ಕೆಂಪು ಬಣ್ಣದ ಸಣ್ಣ ಟಿಲ್ಲರ್ ,  ಕಬ್ಬಿಣದ  ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 177/2025 ಕಲಂ: 303 (2), 62 BNS &  4, 21 MMDR Act 1957ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.