
ಸೆಪ್ಟೆಂಬರ್ 9ರಂದು, ಎಳ್ಳಾರೆ ಗ್ರಾಮದ ಕುಮುದಾ ಶೆಟ್ಟಿ ಮನೆಯ ಅಂಗಳದಲ್ಲಿ ಕುಳಿತಿದ್ದಾಗ, ಅಪರಿಚಿತ ವ್ಯಕ್ತಿ ಹಲ್ಲೆ ನಡೆಸಿ 25 ಗ್ರಾಂ ಚಿನ್ನದ ರೋಪ್ ಚೈನ್ ಕಸಿದು ಪರಾರಿಯಾದ. ವೃದ್ಧೆಗೆ ಗಾಯಗಳಾಗಿದ್ದು ಅವರನ್ನು TMA Pai ಆಸ್ಪತ್ರೆಗೆ ದಾಖಲಿಸಲಾಯಿತು. ಕಳವು ಮಾಡಿದ ಚೈನಿನ ಮೌಲ್ಯ ₹1.75 ಲಕ್ಷ ಎಂದು ಅಂದಾಜಿಸಲಾಗಿದೆ.
”“ತನಿಖೆ ನಡೆಸಿದ ಕಾರ್ಕಳ ಸಿಪಿಐ ಡಿ. ಮಂಜಪ್ಪ ಹಾಗೂ ತಂಡ, ಬೆಳಗಾವಿ ಮೂಲದ ಸುನಿಲ್ ರಮೇಶ್ ಲಮಾಣಿ (29) ಬಂಧಿಸಿ, ಕಳವು ಮಾಡಿದ ಚೈನ್ ವಶಪಡಿಸಿಕೊಂಡಿದ್ದಾರೆ. ಆರೋಪಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಗೊಂಡಿದ್ದಾನೆ.”
