ಸೋಮವಾರಪೇಟೆಯಲ್ಲಿ ನಡೆದ ಒಂಟಿ ಹೆಂಗಸಿನ ದರೋಡೆ ಪ್ರಕರಣ..! ಬಂಟ್ವಾಳದ ನಾಲ್ವರನ್ನು ವಶಕ್ಕೆ ಪಡೆದ ಕೊಡಗು ಪೊಲೀಸರು

ಕೊಡಗು ಜಿಲ್ಲೆಯ ಸೋಮವಾರಪೇಟೆ ಪೊಲೀಸರು ನಿನ್ನೆ ಬಂಟ್ವಾಳ ತಾಲೂಕಿನಲ್ಲಿ ಭರ್ಜರಿ ಕಾರ್ಯಚರಣೆ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಆರೋಪಿಗಳನ್ನು ಕರೋಪಾಡಿ ಜಲೀಲ್ ಕೊಲೆ ಪ್ರಕರಣದ ಆರೋಪಿಗಳಾದ ರೋಶನ್‌ ಮತ್ತು ಪಿಲಿಂಗುರಿ ಸತೀಶ ಹಾಗೂ ಬಾಳೆ ಗಣೇಶ , ವೀರಕಂಭದ ಕುಸುಮಾಕರ ಎಂದು ಗುರುತಿಸಲಾಗಿದೆ. ಸೋಮವಾರ ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಂಟಿ ಹೆಂಗಸಿನ ದರೋಡೆ ಪ್ರಕರಣದಲ್ಲಿ ವಿಟ್ಲ ಮೂಲದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಹಿತಿ ಲಭ್ಯವಾಗಿದೆ.

ನಿನ್ನೆ ವ್ಯಾಗನರ್ ಕಾರ್‌ನಲ್ಲಿ ಬಂದ ಸೋಮವಾರ ಪೇಟೆ ಪೋಲೀಸರು ಮಂಚಿ ಸಮೀಪ ಆರೋಪಿಗಳು ಕೋಳಿ ಅಂಕಕ್ಕೆ ಹೋಗುವಾಗ ವಶಕ್ಕೆ ಪಡೆದಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಜಬ್ಬಾರ್ ಎಂಬಾತ ಜೈಲಿನಲ್ಲಿ ಕೂತು ಸ್ಕೆಚ್ ಹಾಕಿ ಈ ಆರೋಪಿಗಳಿಂದ ಒಂಟಿ ಹೆಂಗಸಿನ ಕಣ್ಣಿಗೆ ಮೆಣಸಿನ ಪುಡಿ ಎರಚಿ 6 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ಇದೆ.

Check Also

ಮಂಗಳೂರು : ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೆ ತೆತ್ತ ಅರ್ಚನಾ ಕಾಮತ್…!!

ಮಂಗಳೂರು : ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಮಹಿಳೆಯೊಬ್ಬರು ತನ್ನ ಪ್ರಾಣವನ್ನೇ ತೆತ್ತ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತರನ್ನು …

Leave a Reply

Your email address will not be published. Required fields are marked *

You cannot copy content of this page.