May 31, 2025 3:58:47 PM
WhatsApp Image 2023-11-05 at 12.01.17 PM

ಉಡುಪಿ: ಸಿಂಡಿಕೇಟ್ ಬ್ಯಾಂಕ್ ಮತ್ತು ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿ.,ನ ನಿವೃತ್ತ ಹಿರಿಯ ಅಧಿಕಾರಿ ಕೆ.ಎಲ್. ಲಕ್ಷ್ಮೀನಾರಾಯಣ ರಾವ್ (84) ವಿಧಿವಶರಾಗಿದ್ದಾರೆ.

ಅಸೌಖ್ಯದಿಂದ ಬಳುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ನ. 3ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಪೆ ಮೂಲದವರಾದ ಕೆ.ಎಲ್. ರಾವ್ ಅವರು ತಮ್ಮ ತಂದೆ ಕೃಷ್ಣಪ್ಪ ನಾಯಕ್ ಅವರು ಸ್ಥಾಪಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು ವರ್ಷ ಶಿಕ್ಷಕರಾಗಿದ್ದರು.

ಬಳಿಕ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿ ಸೇರಿದ ರಾವ್ ಅವರು ಮಣಿಪಾಲ, ಮಂಗಳೂರು, ಮುಂಬಯಿ, ವಿಜಯವಾಡ ಮೊದಲಾದೆಡೆ ಸೇವೆ ಸಲ್ಲಿಸಿ ಮುಖ್ಯ ಪ್ರಬಂಧಕ ಹುದ್ದೆಯಿಂದ 2000ರಲ್ಲಿ ನಿವೃತ್ತರಾದರು.

2001ರಿಂದ 2020ರ ವರೆಗೆ ಮಣಿಪಾಲ್ ಮೀಡಿಯ ನೆಟ್ವರ್ಕ್ ಲಿಮಿಟೆಡ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅನಂತರ ಅವರು ಮಂಗಳೂರಿನಲ್ಲಿ ನೆಲೆಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>