May 29, 2025 5:27:48 AM
WhatsApp Image 2023-10-03 at 9.02.46 AM

ಮಂಗಳೂರು : ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ಘಟನೆ ನಂತರ ಇದೀಗ ಮಂಗಳೂರು ತಾಲೂಕಿನ ಉಳ್ಳಾಲ ಅಬ್ಬಕ್ಕ ವೃತದ ಬಳಿ ಈದ್ ಮಿಲಾದ್ ಮೆರವಣಿಗೆ ಹೆಸರಲ್ಲಿ ಪುಂಡಾಟರು ಹಸಿರು ಬಾವುಟ ಪ್ರದರ್ಶಿಸಿರುವ ಘಟನೆ ನಡೆದಿದೆ.

ಉಳ್ಳಾಲದ ವೀರರಾಣಿ ಅಬ್ಬಕ್ಕ ಸರ್ಕಲ್ ಮೇಲೆ ಯುವಕರ ಗುಂಪೋಂದು ಹಸಿರು ಬಾವುಟ ಪ್ರದರ್ಶಿಸಿದ್ದ ವಿಡಿಯೋ ಒಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮೂಲಕ ವಿಡಿಯೋ ಅಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಸೆಪ್ಟೆಂಬರ್ 28ರಂದು ಈದ್ ಮಿಲಾದ್ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ರಸ್ತೆ ಬಂದ್ ಮಾಡಿ ಬೈಕ್ ಹಾರ್ನ್ ಹಾಕಿಕೊಂಡು ಯುವಕರಿಂದ ಹುಚ್ಚಾಟ ನಡೆದಿತ್ತು. ಸದ್ಯ ವಿಡಿಯೋವನ್ನು ಆಧರಿಸಿ ಯುವಕರನ್ನು ಉಳ್ಳಾಲ ಪೋಲೀಸರು ಇದೀಗ ಪತ್ತೆ ಹಚ್ಚಿದ್ದಾರೆ.

ಶಿವಮೊಗ್ಗ ಘಟನೆ ಬೆನ್ನಲ್ಲೇ ಎಚ್ಚೆತ್ತು ಮಂಗಳೂರು ಪೊಲೀಸರು, ಪುಂಡಾಟ ಮೆರೆದಿದ್ದ ಮಂಜುನಾಡಿ, ಮದಕ, ಬಂಟ್ವಾಳ, ಬಡತಂಗಡಿ,ದೇರಳಕಟ್ಟೆ, ಕೊಣಜೆ, ಹಾಗೂ ಉಳ್ಳಾಲ ಭಾಗದ ಯುವಕರಿಗೆ ವಿಚಾರಣೆಗೆ ಹಾಜರಾಗುವಂತೆ ಉಳ್ಳಾಲ ಠಾಣಾಧಿಕಾರಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>