March 17, 2025
WhatsApp Image 2024-09-30 at 9.14.55 AM

ಬಜಪೆ: ಮರವೂರಿನ ಫಲ್ಗುಣಿ ನದಿಯಲ್ಲಿ ಈಜಲು ಹೋದ ನಾಲ್ವರಲ್ಲಿ ಇಬ್ಬರು ನಾಪತ್ತೆಯಾದ ಘಟನೆ ಭಾನುವಾರದಂದು ಸಂಜೆ ನಡೆದಿದೆ. ಮುಳುಗು ತಜ್ಙರು, ಅಗ್ನಿಶಾಮಕ ದಳ ಹಾಗೂ ಬಜಪೆ ಪೊಲೀಸರಿಂದ ಸತತವಾಗಿ ನಿನ್ನೆಸಂಜೆ ತನಕ ಶೋಧ ಕಾರ್ಯಾಚರಣೆ ಮಾಡಿದ್ದರು. ಆದರೆ ನಾಪತ್ತೆಯಾದ ಇಬ್ಬರೂ ಕೂಡ ಪತ್ತೆಯಾಗಲಿಲ್ಲ, ಇಂದು ಕೂಡ ಬೆಳಿಗ್ಗಿನಿಂದಲೇ ಕಾರ್ಯಾಚರಣೆ ನಡೆದಿದ್ದು, ನಾಪತ್ತೆಯಾದ ಅನೀಶ್(19) ಯುವಕನ ಮೃತದೇಹ ಪತ್ತೆಯಾಗಿದೆ. ಸುಮಿತ್ ಎಂಬ ಯುವಕನ ಪತ್ತೆಗಾಗಿ ಕಾರ್ಯಾಚರಣೆ ಬಿರುಸುಗೊಂಡಿದೆ. ಇಂದು ಸಂಜೆಯ ತನಕವೂ ಕಾರ್ಯಾಚರಣೆ ನಡೆದಿದ್ದು, ಸುಮಿತ್‌ನ ದೇಹ ಮಾತ್ರ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

About The Author

Leave a Reply

Your email address will not be published. Required fields are marked *

You cannot copy content of this page.