ರಾಜಕೀಯ

ಬೆಳ್ತಂಗಡಿ: ಮತ್ತೆ ವಿಧಾನಸಭೆ ಪ್ರವೇಶಿಸಿದ ಹರೀಶ್ ಪೂಂಜ ತಾಲೂಕಿನಾದ್ಯಂತ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಬೆಳ್ತಂಗಡಿ, ಮೇ 13: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ಭರ್ಜರಿ ಜಯಗಳಿಸಿ ಎರಡನೇ ಭಾರಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಮಂಗಳೂರಿನ ಸುರತ್ಕಲ್ ಎನ್‌ಐಟಿಕೆ ಯಲ್ಲಿ ಮತ ಎಣಿಕೆ ನಡೆದು, ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಂಡಿದೆ. ಪ್ರಥಮ ಸುತ್ತಿನಿಂದಲೂ ಕೊನೆಯ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಹರೀಶ್ ಪೂಂಜರು 101004 ಮತಗಳನ್ನು ಗಳಿಸಿ ವಿಜಯ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ರಕ್ಷಿತ್ ಶಿವರಾಂ 82788 ಮತಗಳನ್ನು ಗಳಿಸಿಕೊಂಡಿದ್ದು, 18216 ಮತಗಳ ಅಂತರದಿಂದ ಹರೀಶ್ ಪೂಂಜರವರು ವಿಜಯ ಸಾಧಿಸಿದ್ದಾರೆ. ತಾಲೂಕಿನಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಿಸುತ್ತಿದ್ದಾರೆ.

Read More »

ಕರ್ನಾಟಕ ಚುನಾವಣಾ ಫಲಿತಾಂಶ: ಮ್ಯಾಜಿಕ್ ನಂಬರ್‌ನತ್ತ ಕಾಂಗ್ರೆಸ್!: ಕಮಲ ಬಾಹುವಿನಿಂದ ‘ಕೈ’ ರಕ್ಷಣೆಯ ತಂತ್ರ. ಮಂಗಳೂರಿನಲ್ಲಿ ಮಕ್ಕಳ ಜೊತೆ ಕ್ರಿಕೆಟ್‌ ಆಡಿ ಗಮನ ಸೆಳೆದ ಯು.ಟಿ. ಖಾದರ್

ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಗದಗೆದರಿದೆ. ಕಾಂಗ್ರೆಸ್‌ ಸದ್ಯ 111ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮ್ಯಾಜಿಕ್ ನಂಬರ್‌ಗೆ ಇನ್ನೆರಡು ಸ್ಥಾನ ಬೇಕಿದೆ. ಈ ಸಂಬಂಧ ತಮ್ಮ ಶಾಸಕರನ್ನು ಕಾಯ್ದಿಟ್ಟುಕೊಳ್ಳಲು ಕಾಂಗ್ರೆಸ್ ಸಜ್ಜಾಗಿದೆ. ಯಾರೊಬ್ಬರು ಎದುರು ಪಕ್ಷದ ಆಮಿಷಕ್ಕೆ ಒಳಗಾಗದಂತೆ ಕಾಂಗ್ರೆಸ್ ಶಾಸಕರನ್ನು ನೋಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುರೆದಿದ್ದು, ಕಾಂಗ್ರೆಸ್‌ಗೆ ಮತದಾನ ಪ್ರಭುಗಳು ಜೈ ಎಂದಿದ್ದಾರೆ. ಮಂಗಳೂರಿನಲ್ಲಿ ಮಕ್ಕಳ ಜೊತೆ ಕ್ರಿಕೆಟ್‌ ಆಡಿ ಗಮನ ಸೆಳೆದ ಯು.ಟಿ.ಖಾದರ್ ಮಂಗಳೂರು, ಮೇ, 13: ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಎಲ್ಲಾ ಆರಂಭವಾಗಿದ್ದು, ಎಲ್ಲಾ ಪಕ್ಷಗಳ …

Read More »

ಮಂಗಳೂರು:ಸ್ಟ್ರಾಂಗ್ ರೂಂನ ಕೀ ಕಳೆದುಕೊಂಡ ಅಧಿಕಾರಿಗಳು!

ಮಂಗಳೂರು, ಮೇ 13: ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಮಂಗಳೂರಿನ ಮತ ಎಣಿಕಾ ಕೇಂದ್ರದ ಸ್ಟ್ರಾಂಗ್ ರೂಂನ ಕೀಯನ್ನು ಅಧಿಕಾರಿಗಳು ಕಳೆದುಕೊಂಡಿರುವ ಪ್ರಸಂಗ ನಡೆದಿದೆ. ಮತಎಣಿಕೆ ಹಿನ್ನೆಲೆಯಲ್ಲಿ ಸ್ಟ್ರಾಂಗ್ ರೂಂನತ್ತ ಬಂದ ಅಧಿಕಾರಿಗಳಿಗೆ ಶಾಕ್‌ ಆಗಿದ್ದು, ಸ್ಟ್ರಾಂಗ್ ರೂಂವೊಂದರ ಕೀ ಕಳೆದು ಹೋಗಿರುವುದು ತಿಳಿದು ಬಂದಿದೆ. ಕೂಡಲೇ ಅಧಿಕಾರಿಗಳು ಕೀ ಒಡೆದು ಸ್ಟ್ರಾಂಗ್ ರೂಂ ಓಪನ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಸ್ಟ್ರಾಂಗ್ ರೂಂಗಳು ಸದ್ಯ ಓಪನ್‌ ಆಗಿದ್ದು, ಮತಪೆಟ್ಟಿಗೆಗಳನ್ನು ಎಣಿಕಾ ಟೇಬಲ್‌ಗೆ ರವಾನಿಸಲಾಗಿದೆ. ಮಂಗಳೂರು …

Read More »

ವೇಣೂರಿನಲ್ಲಿ ನಟ ವಿಜಯರಾಘವೇಂದ್ರ ದಂಪತಿ ರೋಡ್ ಶೋ, ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚನೆ

ವೇಣೂರು, ಮೇ 8: ಚಿತ್ರನಟ ವಿಜಯರಾಘವೇಂದ್ರ ಮತ್ತು ಅವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಇಂದು ವೇಣೂರು ಮುಖ್ಯಪೇಟೆಯಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರೋಡ್ ಶೋ ನಡೆಸಿ ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಮತಯಾಚನೆ ನಡೆಸಿದರು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜತೆಗಿದ್ದರು.

Read More »

Bajrang Dal Controversy: ಈಗ ಬಿಜೆಪಿಗರ ಕೈನಲ್ಲಿದೆ ಜೈಭಜರಂಗಬಲಿ ಅಸ್ತ್ರ, ಕಾಂಗ್ರೆಸ್‌ಗೆ ಆಪತ್ತು?

ಬೆಂಗಳೂರು, ಮೇ, 07: ಕಳೆದ ಒಂದೆರಡು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಲೇ ಪ್ರಬಲ ಆಡಳಿತ ವಿರೋಧಿ ಅಲೆಯನ್ನು ಹುಟ್ಟು ಹಾಕಿದ್ದ ಕಾಂಗ್ರೆಸ್ ಕಳೆದ ಕೆಲವು ದಿನಗಳ ತನಕವೂ ರಾಜ್ಯದಲ್ಲಿ ನಂ 1 ಸ್ಥಾನದಲ್ಲಿತ್ತು. ಅಲ್ಲದೆ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರ ಹಿಡಿಯುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಕೆಲವೇ ದಿನಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ಸಮೀಕ್ಷೆಗಳ ಪ್ರಕಾರ ಬಿಜೆಪಿ ಮುನ್ನಲೆಗೆ ಬಂದಿದೆ. ಇಂತಹದೊಂದು ಬೆಳವಣಿಗೆಯ ಹಿಂದೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರ …

Read More »

ಅಂಡಿಂಜೆಯಲ್ಲಿ ಯುವ ಮಹಿಳಾಮಣಿಗಳಿಂದ ಬಿಜೆಪಿ ಅಭ್ಯರ್ಥಿಪರ ಭರ್ಜರಿ ಪ್ರಚಾರ!

ಅಂಡಿಂಜೆ, ಮೇ 6: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಂಡಿಂಜೆ ಬೂತ್‌ಗಳಲ್ಲಿ ಯುವ ಮಹಿಳಾಮಣಿಗಳು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದರು. ಜತೆಗೆ ಬಿಜೆಪಿ ಯುವಕಾರ್ಯಕರ್ತರ ಪಡೆ ಸಾಥ್ ನೀಡಿತ್ತು.

Read More »

ನಡುಬೊಟ್ಟು ಕ್ಷೇತ್ರಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ

ಬೆಳ್ತಂಗಡಿ, ಮೇ 6: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಇಂದು ಮಡಂತ್ಯಾರು ಸಮೀಪದ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಧರ್ಮದರ್ಶಿ ರವಿ ಎನ್. ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Read More »

ಅಳದಂಗಡಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಇಂದು ಸಂಜೆ ಅಣ್ಣಾಮಲೈ, ಶ್ರುತಿ, ಕೋಟ ಅಳದಂಗಡಿಗೆ

ಅಳದಂಗಡಿ, ಮೇ 6: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರ ಪರ ಪ್ರಚಾರ ನಡೆಸಲು ಇಂದು ಸಂಜೆ 4-30 ಗಂಟೆಗೆ ಅಳದಂಗಡಿಗೆ ಕೆ. ಅಣ್ಣಾಮಲೈ, ನಟಿ ಶ್ರುತಿ ಹಾಗೂ ಕೋಟ ಶ್ರೀನಿವಾಸ ಪೂಜಾರ ಆಗಮಿಸಲಿದ್ದಾರೆ.

Read More »

ಪೂಂಜರ ಅಭೂತಪೂರ್ವ ಗೆಲುವಿಗೆ ದೇವರ ಮೊರೆಹೋದ ಕಾರ್ಯಕರ್ತರು! ಗರ್ಡಾಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ

ಪಡಂಗಡಿ, ಮೇ 6: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಪ್ರಚಂಡ ಬಹುಮತದಿಂದ ಗೆಲುವು ಸಾದಿಸುವಂತೆ ಗರ್ಡಾಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಗರ್ಡಾಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Read More »

ಆರಂಬೋಡಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿರ್ವೆರ್ ಕುಡ್ಲದ ಸಂಸ್ಥಾಪಕ ಉದಯ ಪೂಜಾರಿ

ಆರಂಬೋಡಿ, ಎ. 6: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರವಾಗಿ ಬಿರ್ವೆರ್ ಕುಡ್ಲ ಸಂಘಟನೆಯ ಸಂಸ್ಥಾಪಕ, ಚಿತ್ರನಟ ಉದಯ ಪೂಜಾರಿ ಬಳ್ಳಾಲ್‌ಬಾಗ್ ಅವರು ಆರಂಬೋಡಿ ಬೂತ್‌ಗಳಲ್ಲಿ ಮತಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ವಾಗ್ಮಿ ಸಹನಾ ಕುಂದರ್ ಸೂಡ, ಹರೀಶ್ ಪೂಂಜರವರ ಪತ್ನಿ ಡಾ. ಸ್ವೀಕೃತಾ ಪೂಂಜ, ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯ ರಮೇಶ್, ಬಿಜೆಪಿಯ ಪ್ರಮುಖರಾದ ರಾಜೇಶ್ ಮೂಡುಕೋಡಿ, ಕಿರಣ್ ಮಂಜಿಲ, ಸೋಮನಾಥ ಬಂಗೇರ, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ ಹುಲಿಮೇರು, ಸತೀಶ್ ಆರಂಬೋಡಿ, ಸುರೇಂದ್ರ ಹಚ್ಚಾಡಿ, ನಿತೀಶ್ ಗುಂಡೂರಿ, …

Read More »

You cannot copy content of this page.