ತಾಜಾ ಸುದ್ದಿ

ಮೂಡುಬಿದಿರೆಯ ಹಿಂದೂ ಯುವತಿ ಮೈಸೂರಿನಲ್ಲಿ ಮುಸ್ಲಿಂ ಯುವಕನೊಂದಿಗೆ ಲಾಡ್ಜ್‌ನಲ್ಲಿ ಪತ್ತೆ..!

ಮೂಡುಬಿದಿರೆಯ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಹಿಂದೂ ಯುವತಿ (ಗೌಪ್ಯತೆಯನ್ನು ಕಾಪಾಡಲಾಗಿದೆ) ಮೈಸೂರಿನ ಲಾಡ್ಜ್ ಒಂದರಲ್ಲಿ ಮುಸ್ಲಿಂ ಸಮುದಾಯದ ಯುವಕನೊಂದಿಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಲಾಡ್ಜ್ ‌ಗೆ ಬಂದ ಇಬ್ಬರ ಐಡಿ ಕಾರ್ಡ್ ಪರಿಶೀಲಿಸಿದಾಗ ಸತ್ಯಾಂಶ ಬಯಲಿಗೆ ಬಂದಿದೆ. ಯುವತಿ ಮುಸ್ಲಿಂ ಸಮುದಾಯದಂತೆ ಸ್ಕಾರ್ಫ್ ಧರಿಸಿದ್ದು ಅನುಮಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಭಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಈರ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Read More »

ಬೆಳ್ತಂಗಡಿ ಅರಣ್ಯಾಧಿಕಾರಿಯ ಭ್ರಷ್ಟಾಚಾರ ಸಾಬೀತು – 1.5 ಕೋಟಿ ದಂಡ, 5 ವರ್ಷ ಜೈಲು ಶಿಕ್ಷೆ!

ಮಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರಣ್ಯಾಧಿಕಾರಿಗೆ ಭ್ರಷ್ಟಾಚಾರದಡಿ 1.5 ಕೋಟಿ ದಂಡ ಮತ್ತು 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಸತ್ರ (ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ. ಬೆಳ್ತಂಗಡಿ ಸೈಹಾದ್ರಿ ವಲಯದ ವಲಯ ಅರಣ್ಯಾಧಿಕಾರಿ ಆರೋಪಿ ಎಸ್.ರಾಘವ ಪಾಟಾಳಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಆರೋಪಿಯಾಗಿದ್ದಾರೆ. ಪಾಟಾಳಿ ಮೇಲೆ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವ ದೂರಿನ ಮೇರೆಗೆ ಮಂಗಳೂರು ಕರ್ನಾಟಕ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ D:21-07-2011 do da od 11/2011 o 13(1x) tad …

Read More »

15 ದಿನಗಳ ಅಂತರದಲ್ಲಿ ಮಕ್ಕಳು ಸೇರಿ 18 ಮಂದಿ ನಿಗೂಢ ಕಾಯಿಲೆಗೆ ಬಲಿ- ವೈದ್ಯರಲ್ಲಿ ಆತಂಕ

ಪಾಕಿಸ್ತಾನ: ಕರಾಚಿಯ ಕೆಮಾರಿ ಪ್ರದೇಶದಲ್ಲಿ ನಿಗೂಢ ಕಾಯಿಲೆಗೆ 15 ದಿನಗಳ ಅಂತರದಲ್ಲಿ ಮಕ್ಕಳು ಸೇರಿ 18 ಮಂದಿ ನಿಗೂಢವಾಗಿ‌ ಮೃತಪಟ್ಟಿದ್ದಾರೆ. ಜನವರಿ 10ರಿಂದ 25ರವರೆಗೆ ಕೆಮಾರಿಯ ಮವಾಚ್ಗೋಥ್ ಪ್ರದೇಶದಲ್ಲಿ ನಿಗೂಢ ಕಾಯಿಲೆಯಿಂದ 14 ಮಕ್ಕಳ ಸಹಿತ 18 ಮಂದಿ ಮೃತಪಟ್ಟಿದ್ದಾರೆ.ಮೃತರಲ್ಲಿ ಒಂದೇ ಕುಟುಂಬದ 6 ಮಂದಿ ಸೇರಿದ್ದಾರೆ. ಸಾವಿಗರ ಕಾರಣ ನಿಗೂಢವಾಗಿದೆ.ಮವಾಚ್ಗೋಥ್ ಪ್ರದೇಶವು ಕರಾವಳಿ ತೀರಕ್ಕೆ ಸಮೀಪದಲ್ಲಿರುವುದರಿಂದ ಇದು ಸಮುದ್ರ ಅಥವಾ ನೀರಿಗೆ ಸಂಬಂಧಿಸಿದ ಕಾಯಿಲೆಯಾಗಿರಬಹುದೆಂದು ಅಂದಾಜಿಸಲಾಗಿದೆ ಎಂದವರು ಹೇಳಿದ್ದಾರೆ. ಮೃತಪಟ್ಟವರು ತೀವ್ರ ಜ್ವರ,ಗಂಟಲಿನಲ್ಲಿ ಊತ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಮೃತರ …

Read More »

ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಬಿ ಕೇರ್ ಪುಲ್: ಪ್ರತಿಷ್ಠಿತ ಶಾಲೆಗೆ ದಾಖಲಾತಿ ಮಾಡೋ ಮುನ್ನ ಈ ಸುದ್ದಿ ಓದಿ

ಬೆಂಗಳೂರು: ನಗರದಲ್ಲಿ ನಾಯಿ ಕೊಡಗಳಂತೆ ದಿನೇ ದಿನೇ ಶಾಲೆಗಳ ತಲೆ ಎತ್ತುತ್ತಿವೆ. ಇವುಗಳಲ್ಲಿ ಅಧಿಕೃತ ಯಾವು, ಅನಧಿಕೃತ ಶಾಲೆಗಳು ಯಾವುವು ಎನ್ನುವುದನ್ನು ತಿಳಿಯದೇ ಪೋಷಕರು ಮಾತ್ರ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳೆಂದು ಲಕ್ಷ ಲಕ್ಷ ಫೀಸ್ ನೀಡಿ ಸೇರಿಸುತ್ತಿರುತ್ತಾರೆ. ಇದೀಗ ಆರ್ಕಿಡ್ ಶಾಲೆಯ ಅನುಧಿಕೃತತೇ ಬೆಳಕಿಗೆ ಬರುತ್ತಿದ್ದಂತೇ, ಮತ್ತಷ್ಟು ಖಾಸಗಿ ಶಾಲೆಗಳ ಡ್ರಾಮಾ ಬಟಾ ಬಯಲಾಗಿದೆ. ಹೀಗಾಗಿ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಬಿ ಕೇರ್ ಪುಲ್. ಪ್ರತಿಷ್ಠಿತ ಶಾಲೆ ಎಂದು ದಾಖಲಾತಿ ಮಾಡೋ ಮುನ್ನ ಸುದ್ದಿ ಮುಂದೆ ಓದಿ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಬಿಎಸ್ಸಿ, …

Read More »

‘ಗೋ ಫಸ್ಟ್’ ವಿಮಾನಕ್ಕೆ 10 ಲಕ್ಷ ದಂಡ ವಿಧಿಸಿದ ‘DGCA’ ಯಾಕೇ ಗೊತ್ತಾ…..?

ನವದೆಹಲಿ : ಬೆಂಗಳೂರು ವಿಮಾನ ನಿಲ್ದಾಣದಲ್ಲಿ(Bengaluru airport) 55 ಪ್ರಯಾಣಿಕರನ್ನು ಬಿಟ್ಟಿದ್ದಕ್ಕಾಗಿ DGCA ಗೋ ಫಸ್ಟ್ (Go First) ವಿಮಾನದಲ್ಲಿ ಬರೋಬ್ಬರಿ 10 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. ಈ ಸುದ್ದಿ ಈಗ ತಾನೆ ಬಂದಿದೆ. ಹೆಚ್ಚಿನ ಮಾಹಿತಿ ಸಿಕ್ಕ ಕೂಡಲೇ ಅಪ್ ಡೇಟ್ ಮಾಡಲಾಗುವುದು. ಪುನಃ ನಮ್ಮ ಪೇಜಿಗೆ ಭೇಟಿ ನೀಡಿ.

Read More »

ಶಾಲಾ ಬಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾಗಿದ್ದ ಶಾಲಾ ಬಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾದ ಘಟನೆ ಪಲ್ಲಿಕೆರೆ ಪೂಚೆಕ್ಕಾಡ್ ಬಳಿ ನಡೆದಿದೆ. ಮುಹಮ್ಮದ್ ಶಹೀಮ್ ಮೃತ ಬಾಲಕ. ಈತ ತೆಕ್ಕುಪುರಂ ನಿವಾಸಿ ಸುಬೈರ್ ಮತ್ತು ಸಮೀರಾ ದಂಪತಿಯ ಪುತ್ರನಾಗಿದ್ದ. ಶಹೀಮ್ ಬುಧವಾರ ಶಾಲೆಯಿಂದ ಬೇಗನೇ‌ ಬಂದಿದ್ದ. ಆದರೆ ಮನೆಗೆ ತೆರಳಿಲ್ಲ. ಸಂಜೆ ಶಾಲಾ ಸಮಯ‌ ಕಳೆದರೂ‌ ಮಗು ಮನೆಗೆ ಬರದಿದ್ದಾಗ ಪೋಷಕರು ವಿಚಾರಿಸಿದ್ದಾರೆ.ಈ ವೇಳೆ‌ ಶಹೀಮ್‌ ಶಾಲೆಯಿಂದ ಮಧ್ಯಾಹ್ನ‌ ತೆರಳಿರುವ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದ್ದಾರೆ. ಬಳಿಕ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ರೈಲ್ವೇ ಹಳಿಯಲ್ಲಿ‌ ಬಾಲಕನ …

Read More »

ಬಹುಭಾಷಾ ಹಿರಿಯ ನಟಿ ಜಮುನಾ ನಿಧನ

ಹೈದರಾಬಾದ್: ಬಹುಭಾಷಾ ಹಿರಿಯ ನಟಿ ಜಮುನಾ (86) ಶುಕ್ರವಾರ (ಜ.27 ರಂದು) ಮುಂಜಾನೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಮುನಾ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ನಟಿಯ ಹಿನ್ನೆಲೆ: ಜಮುನಾ ನಟಿ ಹಾಗೂ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ತನ್ನ 16ನೇ ವಯಸ್ಸಿನಲ್ಲಿ ʼ ಪುಟ್ಟಿಲುʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, 1955 ರಲ್ಲಿ ರಿಲೀಸ್‌ ಆದ ಎಲ್.ವಿ.ಪ್ರಸಾದ್ ಅವರ ʼಮಿಸ್ಸಮ್ಮʼ ಸಿನಿಮಾದಿಂದ ಹೆಚ್ಚು ಖ್ಯಾತಿಗಳಿಸಿದರು. ಕನ್ನಡ, ತಮಿಳು ಚಿತ್ರದಲ್ಲೂ ನಟಿಸಿ ಖ್ಯಾತಿಗಳಿಸಿದ್ದಾರೆ. ಜಮುನಾ 9ನೇ …

Read More »

28 ವರ್ಷದ ಸೊಸೆಯನ್ನು ಪ್ರೀತಿಸಿ ಮದುವೆಯಾದ 70 ವರ್ಷದ ಮಾವ..!ಅವರಿಬ್ಬರ ಪ್ರೀತಿ ಶುರುವಾಗಿದ್ದು ಹೇಗೆ ನೋಡಿ..!

ಸಾಮಾನ್ಯವಾಗಿ ಇವತಿಯರು ಮದುವೆಯಾಗಿ ತಮ್ಮ ಮಾವನ ಮನೆಗೆ ಹೋದ ಮೇಲೆ ಅಲ್ಲಿರುವಂತಹ ಮಾವ ತಂದೆಗೆ ಸಮಾನ ಎಂದು ಹಿರಿಯರು ಹೇಳುತ್ತಾರೆ. ತಮ್ಮ ಮಗ ಹಾಗೂ ಸೊಸೆಯನ್ನು ತಮ್ಮ ಮಕ್ಕಳಂತೆ ಹಲವಾರು ಅತ್ತೆ ಮಾವಂದಿರು ನೋಡಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಘಟನೆ ತುಂಬಾನೇ ವಿಚಿತ್ರವಾಗಿದೆ, ಮಾವನೇ ತನ್ನ ಸೊಸೆಯನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಹೌದು ಉತ್ತರಪ್ರದೇಶದ ಗೋರಕ್ಪುರ್ ಎಂಬ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಾವ ಮತ್ತು ಸೊಸೆಯ ನಡುವೆ ಆ ಪ್ರೀತಿ ಹೇಗೆ ಹುಟ್ಟಿತು ಎಂಬ ಕತೆಯನ್ನು ನಾವು ಹೇಳುತ್ತೇವೆ ಮುಂದೆ ಓದಿ. ಮಾವನ ಹೆಸರು ಕೈಲಾಶ್ …

Read More »

ಸುಳ್ಯ: ಎರಡು ಪ್ರತ್ಯೇಕ ಪ್ರಕರಣ: ವೃದ್ಧ ಮತ್ತು ಗರ್ಭಿಣಿ ಮಹಿಳೆ ಆತ್ಮಹತ್ಯೆ…!

ಸುಳ್ಯ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಓರ್ವ ವೃದ್ಧ ಹಾಗೂ ಗರ್ಭಿಣಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ-1: ಸುಳ್ಯದ ಅಜ್ಜಾವರ ಗ್ರಾಮದ ಪಡ್ಡಂಬೈಲು ಸಮೀಪದ ನಾಂಗುಳಿ ಎಂಬಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರತ್ ಎಂಬವರ ಪತ್ನಿ ಮಲ್ಲಿಕಾ (26) ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವ ಗರ್ಭಿಣಿ. ಮೃತ ಮಹಿಳೆ ಮಲ್ಲಿಕಾ ಅವರು ಕೆ.ವಿ.ಜಿ. ಆಯುರ್ವೇದಿಕ್ ನಲ್ಲಿ ಉದ್ಯೋಗಿಯಾಗಿದ್ದು, ಗಣರಾಜ್ಯೋತ್ಸವ ರಜೆ ಹಿನ್ನಲೆ ಮಲ್ಲಿಕಾ ಮನೆಯಲ್ಲಿದ್ದರು. ಸಂಜೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಕೊಂಡು …

Read More »

BREAKING NEWS : ‘KMF’ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ : ಸ್ಯಾಂಡಲ್ ವುಡ್ ನಿರ್ಮಾಪಕ ಪ್ರಕಾಶ್ ಅರೆಸ್ಟ್

ಬೆಂಗಳೂರು : ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ನಿರ್ಮಾಪಕ ಪ್ರಕಾಶ್ ನ ನ್ನು ಅಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಟ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಶಬಾಷ್ ಬಡ್ಡಿ ಮಗನೇ ಸಿನಿಮಾದ ನಿರ್ಮಾಪಕ ಪ್ರಕಾಶ್ ಬಂಧನವಾಗಿದೆ. ಇದೀಗ ವಂಚನೆ ಕೇಸ್ ನಲ್ಲಿ ನಿರ್ಮಾಪಕನ ಬಂಧನವಾಗಿದೆ. ಕೆಎಂಎಫ್ ನಲ್ಲಿ 20 ಲಕ್ಷಕ್ಕೆ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಚಿಕ್ಕಬಳ್ಳಾಪುರ ಮೂಲದ ಚರಣ್ ಎಂಬುವವರಿಂದ ಮುಂಗಡವಾಗಿ 10 ಲಕ್ಷ ಹಣ ಪಡೆದಿದ್ದರು. ಕಳೆದ ಡಿಸೆಂಬರ್ ನಲ್ಲಿ ಕೆಎಂಎಫ್ ನಲ್ಲಿ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆ …

Read More »

You cannot copy content of this page.