ತಾಜಾ ಸುದ್ದಿ

ಗಂಡನನ್ನು ಕೊ ಲ್ಲಲು ಕಣ್ಣಿನ ಹನಿಗಳನ್ನು ಬಳಸಿದ ಹೆಂಡತಿ! ಎಂಥಾ ಚಾಲಾಕಿ ಚೋರಿ ಇವಳು ನೋಡಿ

ಗಂಡ ಹೆಂಡರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ ಆದರೆ ಈ ಗಾದೆ ಮಾತು ಕೂಡ ಇದೀಗ ಸುಳ್ಳಾಗಿದೆ. ಒಂದು ಮಲಗಿದರೂ ಕೂಡ ಗಂಡನ ಮೇಲೆ ಕೋಪ ತಾಳಲಾರದೆ ಗಂಡನನ್ನು ಹೆಂಡತಿ ಮುಗಿಸಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ತುಂಬಾ ವಿಚಿತ್ರವಾದ ರೀತಿಯಲ್ಲಿ ಸಿನಿಮಾಗಳಲ್ಲಿ ತೋರಿಸುವ ಹಾಗೆ ಗಂಡನನ್ನು ಹೆಂಡತಿಒಂದು ಸಣ್ಣ ಕ್ಲೂ ಕೂಡ ಸಿಗದೇ ಇರೋ ತರ ಮುಗಿಸಿದ್ದಾಳೆ. ಈ ಚಾಲಾಕಿ ಹೆಣ್ಣಿನ ಹೆಸರು ಲಾನಾ ಸ್ಟೀವನ್. ಇವಳ ಗಂಡನ ಹೆಸರು ಕ್ಲೆಟನ್ ಸ್ಟೀವನ್. ನಾನಾ ಸ್ಟೀವನ್ ವಯಸ್ಸು 53 ಮತ್ತು …

Read More »

ನೀರಿನ ಟ್ಯಾಂಕ್ ಗೆ ಬಿದ್ದು ಅಂಗನವಾಡಿ ಪುಟಾಣಿ ಸಾವು…!

ಅಂಗನವಾಡಿ ಪುಟಾಣಿಯೊಬ್ಬಳು ಸೆಪ್ಟಿಕ್‌ ಟ್ಯಾಂಕ್‌ಗೆ ಬಿದ್ದು ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಬೀದರ್‌ ಜಿಲ್ಲೆಯಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಔರಾದ ಪಟ್ಟಣದ ಟೀಚರ್ ಕಾಲೋನಿಯಲ್ಲಿರುವ ಅಂಗನವಾಡಿಯಲ್ಲಿ ದುರಂತ ನಡೆದಿದ್ದು, ಸ್ಫೂರ್ತಿ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಅಂಗನವಾಡಿಯ ಪಕ್ಕದಲ್ಲೇ ಕೊಳಚೆ ನೀರಿನ ಸಂಗ್ರಹ ಮತ್ತು ವಿಲೇವಾರಿಗಾಗಿ ಈ ಸೆಪ್ಟಿಕ್‌ ಟ್ಯಾಂಕನ್ನು ನಿರ್ಮಿಸಲಾಗಿದೆ. ಬಾಲಕಿ ಅಂಗನವಾಡಿಯ ತರಗತಿಯಿಂದ ಹೊರಗೆ ಬಂದು ಆಟವಾಡುತ್ತಿದ್ದ ವೇಳೆ ಆಯತಪ್ಪಿ ಸೆಪ್ಟಿಕ್‌ ಟ್ಯಾಂಕ್‌ಗೆ ಬಿದ್ದಿದ್ದಾಳೆ ಎನ್ನಲಾಗಿದೆ. ಮಗು ಟ್ಯಾಂಕ್‌ಗೆ ಬಿದ್ದಿದ್ದನ್ನು ತಿಳಿದ ಊರಿನವರು ದೌಡಾಯಿಸಿ ಬಂದಿದ್ದು ಎಲ್ಲರೂ ಸೇರಿ ಮೇಲೆತ್ತಿದರು. ಆದರೆ, …

Read More »

ಕೆನರಾ ಸಾಂಸ್ಕೃತಿಕ ಅಕಾಡೆಮಿ ಉದ್ಘಾಟನೆ

ಮಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳ್ಳುವ ಸಂದರ್ಭದಲ್ಲಿ ಅದರ ಆಶಯದಂತೆ ಬಹು ವಿಧ ಪ್ರತಿಭೆಗಳ ಸಂಪೂರ್ಣ ಅನಾವರಣ ಗೊಳಿಸುವಲ್ಲಿ ಹಾಗೂ ಯುವಶಕ್ತಿಯನ್ನು ಪ್ರಬುದ್ಧ ಮಾನವ ಸಂಪನ್ಮೂಲವನ್ನಾಗಿ ರೂಪಿಸಲು ಕೆನರಾ ಸಾಂಸ್ಕೃತಿಕ ಅಕಾಡೆಮಿ ಸ್ಥಾಪನೆಗೊಳ್ಳುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಭಾರತಕ್ಕೆ ಶಕ್ತಿಯುತ ದೂರ ದೃಷ್ಟಿಯನ್ನು ಹೊಂದುವ , ವಿವಿಧ ಕ್ಷೇತ್ರದ ಸಬಲೀಕರಣದ ಕನಸನ್ನು ನನಸುಗೊಳಿಸುವಲ್ಲಿನಮ್ಮ ದೇಶದ ಪ್ರಧಾನ ಮಂತ್ರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಅಮೃತಕಾಲದ ಸಂದರ್ಭ ಇಂತಹ ಅಕಾಡೆಮಿ ಯುವ ಮನಸುಗಳಲಿರುವ ಸಾಂಸ್ಕೃತಿಕ ಹಾಗೂ ಸೃಜನಶೀಲ ವ್ಯಕ್ತಿತ್ವವನ್ನು ಇನ್ನೂ ಗಟ್ಟಿಗೊಳಿಸಲು ಸಾಧ್ಯವಾಗುತ್ತಿರುವುದು ಹೆಮ್ಮೆಯ ಸಂಗತಿ. 132 ವರ್ಷಗಳ ಹಿಂದೆ …

Read More »

ಸಾರ್ವಜನಿಕರ ಕುಂದು ಕೊರತೆ ಆಲಿಸಲು ಫೆ.10ಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿಗೆ

ಮಂಗಳೂರು: ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರು ಫೆಬ್ರವರಿ 10 ಶುಕ್ರವಾರ ಮಂಗಳೂರಿನಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ನೈಜ ವೈಯಕ್ತಿಕ ಅಥವಾ ಸಾರ್ವಜನಿಕ ಕುಂದುಕೊರತೆಗಳಿರುವ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಜನರು ಶುಕ್ರವಾರ ಸಂಜೆ 7 ಗಂಟೆಗೆ ಐಜಿಪಿ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಸಾಮಾನ್ಯ ನಾಗರಿಕರ ಸೇವೆಯೇ ಇಲಾಖೆಯ ಧ್ಯೇಯವಾಗಿದೆ ಎಂದು ತಮ್ಮ ಸಂದೇಶದಲ್ಲಿ ಅಲೋಕ್ ಕುಮಾರ್ ತಿಳಿಸಿದ್ದಾರೆ

Read More »

ತೃತೀಯ ಲಿಂಗಿ ದಂಪತಿಗಳಿಗೆ ʼಗಂಡು ಮಗುʼವಿನ ಜನನ

ಸಲಿಂಗಿ ದಂಪತಿ ಜಿಯಾ ಪಾವಲ್‌ ಮತ್ತು ಜಿಹಾದ್‌ ಅವರಿಗೆ ಗಂಡು ಮಗುವಾಗಿದೆ. ಹೆರಿಗೆ ನಂತರ ತಾಯಿ ಹಾಗೂ ಮಗು ಚೆನ್ನಾಗಿದ್ದಾರೆ ಎಂದು ಅವರ ಸ್ನೇಹಿತ ಆಡಮ್ ಹ್ಯಾರಿ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಅವರ ಸ್ನೇಹಿತರು ಮಗುವನ್ನು ನೋಡಲು ಕಾತುರತೆಯಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ಈ ಕುರಿತು ಆಡಮ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, ಜಿಯಾ ಉತ್ಸಾಹದಿಂದ ಹೊರಗೆ ಕಾಯುತ್ತಿದ್ದಾನೆ, ನನ್ನ ಜೀವನದಲ್ಲಿ ನಾನು ಎಂದಿಗೂ ಸಂತೋಷವನ್ನು ಅನುಭವಿಸಿಲ್ಲ ಮಗು ಗಂಡೋ ಅಥವಾ ಹುಡುಗಿಯೋ ಎಂದು ಕೇಳುವವರಿಗೆ ಮಗು ಬೆಳೆದಾಗ ಹೇಳಲಾಗುವುದು ಎಂದು ಶೀರ್ಷಿಕೆ ಬರೆದು …

Read More »

ಮಂಗಳೂರು: ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆ

ಮಂಗಳೂರು: ಕೇರಳ ಮೂಲದ ದಂಪತಿಗಳು ಒಂದೇ ಪ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಫಳ್ನೀರಿನ ಲಾಡ್ಜ್ ಒಂದರಲ್ಲಿ ನಡೆದಿದೆ. ಮೃತರನ್ನು ಕಣ್ಣೂರು ಜಿಲ್ಲೆಯ ತಳಿಪರಂಬ ನಿವಾಸಿಗಳಾದ ರವೀಂದ್ರನ್(56) ಮತ್ತು ಅವರ ಪತ್ನಿ ಸುಧಾ (50) ಎಂದು ಗುರುತಿಸಲಾಗಿದೆ. ನಗರದ ಫಳ್ನೀರಿನ ಬ್ಲೂ ಸ್ಟಾರ್ ಲಾಡ್ಜ್ ಗೆ ಫೆಬ್ರವರಿ 6 ರಂದು ಆಗಮಿಸಿದ್ದ ದಂಪತಿ ರಾತ್ರಿ ಹೊಟೇಲ್ ಸಿಬ್ಬಂದಿಯಲ್ಲಿ ಊಟ ತರಿಸಿಕೊಂಡಿದ್ದರು, ಆದರೆ ಕಳೆದ ಎರಡು ದಿನಗಳಿಂದ ಬಾಗಿಲು ತೆಗೆಯದ ಕಾರಣ ಬಾಗಿಲು ಒಡೆದು ನೋಡಿದಾಗ ಒಂದೇ ಫ್ಯಾನಿಗೆ ಇಬ್ಬರೂ ನೇಣು …

Read More »

ವ್ಯಕ್ತಿಯ ಮೇಲೆ PSI ಫೈರಿಂಗ್‌ ಪ್ರಕರಣ : ಆರೋಪಿ ಕಾಲು ಕತ್ತರಿಸಿದ ವೈದ್ಯರು

ಕಲಬುರಗಿ : ವ್ಯಕ್ತಿಯ ಮೇಲೆ ಪೊಲೀಸ್‌ ಪಿಎಸ್‌ಐ ಫೈಯರ್‌ ಪ್ರಕರಣದಲ್ಲಿ ಕಾಲಿಗೆ ಗುಂಡು ತಗುಲಿದ್ದ ವ್ಯಕ್ತಿಯ ಕಾಲನ್ನು ವೈದ್ಯರು ತುಂಡಾರಿಸಿದ ಘಟನೆ ಬೆಳಕಿಗೆ ಬಂದಿದೆ. ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಪೋಲಿಸರ ಮೇಲೆ ಮೊಹಮ್ಮದ್‌ ಫಜಲ್‌ ತಲ್ವಾರ್‌ ಹಿಡಿದು ಹಲ್ಲೆಗೆ ಮುಂದಾಗಿದ್ದ ವ್ಯಕ್ತಿಯ ಕಾಲಿಗೆ ಪಿಎಸ್‌ಐ ವಾಹಿದ್‌ ಕೋತ್ವಾಲ್‌ ಗುಂಡು ಹೊಡೆದಿದ್ದರು. ವಾಹಿದ್‌ ಕೋತ್ವಾಲ್‌ ಚೌಕ್‌ ಪೊಲೀಸ್‌ ಠಾಣೆ ಪಿಎಸ್‌ಐ ಎಂದು ಗುರುತಿಸಲಾಗಿದೆ. ಗುಂಡು ತಗಲಿದ್ದರಿಂದ ಫಜಲ್‌ ಕಾಲು ತುಂಬಾ ಡ್ಯಾಮೇಜ್‌ ಆಗಿತ್ತು. ಇನ್ನೂ ಹೆಚ್ಚು ತೊಂದರೆ ಸಾಧ್ಯತೆ ಹಿನ್ನೆಲೆ ಆತನ ಕಾಲನ್ನು ವೈದ್ಯರು ತುಂಡು …

Read More »

ಉಡುಪಿ: ಬಚ್ಚಲು ಮನೆಯ ಆಕಸ್ಮಿಕ ಬೆಂಕಿಗೆ ಭಾಗಶಃ ಸುಟ್ಟ ಮನೆ..!

ಉಡುಪಿ : ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯೊಂದು ಭಾಗಶಃ ಸುಟ್ಟುಹೋಗಿರುವ ಘಟನೆ ಉಡುಪಿ ಜಿಲ್ಲೆಯ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲುವಿನ ಕೋಡುಗುಡ್ಡೆ ಎಂಬಲ್ಲಿ ನಡೆದಿದೆ. ಇಲ್ಲಿನ ಕೋಡುಗುಡ್ಡೆ ನಿವಾಸಿಯಾಗಿರುವ ಲೀನಾ ಕುಟ್ಹಿನೋ ಎಂಬವರ ವಾಸದ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಭಾಗಶಃ ಸುಟ್ಟುಹೋಗಿದೆ. ನಿನ್ನೆ ಸಂಜೆ ಸುಮಾರು 5 ಗಂಟೆಯ ವೇಳೆ ಅವಘಡ ಸಂಭವಿಸಿದೆ. ಬಚ್ಚಲು ಮನೆಯಲ್ಲಿ ಉರಿಯುತ್ತಿದ್ದ ಬೆಂಕಿ ಅಕಸ್ಮಿಕವಾಗಿ ಮನೆಯ ಒಂದು ಪಾಶ್ವದ ಹಂಚು ಚಾವಣಿಗೆ ತಗಲಿದ ಪರಿಣಾಮ ಮನೆಯ ಒಂದು ಪಾಶ್ವದಲ್ಲಿದ್ದ ಹಂಚು ಚಾವಣಿ ಹಾಗೂ ಮೇಲಿನ …

Read More »

ಕುಂದಾಪುರ: ಕಾಸರಗೋಡು ಬೀಚ್ ಬಳಿ ಕಾನ್‌ಸ್ಟೇಬಲ್ ಆತ್ಮಹತ್ಯೆ

ಕುಂದಾಪುರ: ಕುಂದಾಪುರ ನಗರ ಠಾಣೆಯ ಕಾನ್‌ಸ್ಟೇಬಲ್‌ವೊಬ್ಬರು ಹೊನ್ನಾವರ ತಾಲೂಕಿನ ಕಾಸರಗೋಡು ಇಕೋ ಬೀಚ್‌ ಬಳಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಘಟನೆಗೆ ಅನಾರೋಗ್ಯ ಅಥವಾ ಆನ್‌ಲೈನ್ ಬೆಟ್ಟಿಂಗ್‌ನಿಂದಾಗಿ ಉಂಟಾದ ಆರ್ಥಿಕ ಸಂಕಷ್ಟ ಕಾರಣ ಎಂಬ ಶಂಕೆ ಮೂಡಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನಾಡು ಮಾಸ್ಕೇರಿ ಗ್ರಾಮದ ನಾಗೇಶ ಗೌಡ ಅವರ ಪುತ್ರ ರಾಮ ಗೌಡ (32) ಆತ್ಮಹತ್ಯೆಗೆ ಶರಣಾದವರು. ಕಳೆದ 5 ವರ್ಷಗಳಿಂದ ಕುಂದಾಪುರ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿದ್ದರು. ಮಂಗಳವಾರ ಘಟನೆ ಬೆಳಕಿಗೆ ಬಂದಿದೆ. ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ತಿಳಿಸದೆ ಫೆಬ್ರವರಿ 2ರಿಂದಲೇ …

Read More »

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಚಾರ್ಜ್‌ ಶೀಟ್‌ ನಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಇಡೀ ದೇಶವನ್ನೇ ಆತಂಕಕ್ಕೆ ದೂಡಿದ್ದ ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬಯಲಾಗ್ತಿವೆ. ಆರೋಪಿ ಅಫ್ತಾಬ್ ಪೂನಾವಾಲಾ, ತನ್ನ ಲಿವ್ ಇಲ್ ರಿಲೇಷನ್ ಶಿಪ್ ಗೆಳತಿ ಶ್ರದ್ಧಾ ವಾಕರ್ ಮೂಳೆಗಳನ್ನ ಗ್ರೈಂಡರ್ ನಲ್ಲಿ ಪುಡಿ ಮಾಡಿದ್ದ. ಬಳಿಕ ಅದನ್ನ ಪುಡಿ ರೂಪದಲ್ಲಿ ವಿಲೇವಾರಿ ಮಾಡಿದ್ದ ಎನ್ನುವುದು ಬಯಲಾಗಿದೆ. ಶ್ರದ್ಧಾ ಹತ್ಯೆ ಬಳಿಕ ಆತ ಎಸೆದ ಕೊನೆಯ ತುಣುಕು ಆಕೆಯ ತಲೆಯಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಪೊಲೀಸರು ಸಲ್ಲಿಸಿರುವ 6,600 ಪುಟಗಳ ಚಾರ್ಜ್‌ ಶೀಟ್ ನಲ್ಲಿ ಇಂತಹ ಭಯಾನಕ ಅಂಶಗಳನ್ನ …

Read More »

You cannot copy content of this page.