ತಾಜಾ ಸುದ್ದಿ

ಉಡುಪಿ: ಮಗಳೊಂದಿಗೆ ನಾಪತ್ತೆಯಾದ ತಾಯಿ..!

ಉಡುಪಿ: ನಗರದ ನಯಂಪಳ್ಳಿ ನಿವಾಸಿ ಅಕ್ಷತಾ (32) ಎಂಬ ಮಹಿಳೆಯು ತನ್ನ ಮಗಳಾದ ಖುಷಿ (9) ಯೊಂದಿಗೆ ಏಪ್ರಿಲ್ 30 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. ಅಕ್ಷತಾ 5 ಅಡಿ 4 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಖುಷಿ 4 ಅಡಿ 2 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಇಂಗ್ಲೀಷ್ ಹಾಗೂ ತುಳು ಭಾಷೆ ಮಾತನಾಡುತ್ತಾರೆ. …

Read More »

ಬೆಂಗಳೂರಿಗೆ ಆಗಮಿಸಿದ ಸ್ಪಂದನಾ ಪಾರ್ಥಿವ ಶರೀರ; ಇಂದು ಮಧ್ಯಾಹ್ನ ಬಳಿಕ ಅಂತ್ಯಕ್ರಿಯೆ

ಸ್ಯಾಂಡಲ್‌ವುಡ್‌ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್‌ ರಾಘವೇಂದ್ರ ಅವರ ಪಾರ್ಥಿವ ಶರೀರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಅಂಬ್ಯಲೆನ್ಸ್‌ ಮೂಲಕ ಬಿ.ಕೆ.ಶಿವರಾಂ ಅವರ ಮಲ್ಲೇಶ್ವರಂ ನಿವಾಸಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಕೆಂಪೇಗೌಡ ವಿಮಾನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್‌ಗೆ ಸ್ಪಂದನಾ ಅವರ ಮೃತದೇಹ ಆಗಮಿಸಿದೆ. ನಿಯಮಾನುಸಾರ ಪಾರ್ಥಿವ ಶರೀರದ ಸ್ಕ್ಯಾನಿಂಗ್‌ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅಧಿಕಾರಿಗಳು ಸರ್ಟಿಫಿಕೆಟ್‌ ನೀಡುತ್ತಾರೆ. ಕಸ್ಟಮ್ಸ್‌ ಅಧಿಕಾರಿಗಳು ಕ್ಲಿಯರೆನ್ಸ್‌ ನೀಡಿದ ಬಳಿಕ ಪಾರ್ಥವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. …

Read More »

ಬೆಳ್ತಂಗಡಿ ಆಸ್ಪತ್ರೆಯಲ್ಲಿ ಮಗು ಸಾವು: ಸಿಬ್ಬಂದಿ ನಿರ್ಲಕ್ಷ್ಯ ಆರೋಪ

ಬೆಳ್ತಂಗಡಿ: ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್‌ ಇಲ್ಲದ ವೇಳೆ ನರ್ಸ್ ಇಂಜೆಕ್ಷನ್ ನೀಡಿದ ಬಳಿಕ ಮಗು ಸಾವನ್ನಪ್ಪಿದ ಪ್ರಕರಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಧರ್ಮಸ್ಥಳ ಗ್ರಾಮದ ಮುಳಿಕಾರ್ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಯ 1.5 ತಿಂಗಳ ಹೆಣ್ಣು ಮಗು ಅಂಶಿಕಾಳನ್ನು ಕಫ ಸಮಸ್ಯೆ ಕಾರಣಕ್ಕೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಡಾಕ್ಟರ್ ಇಲ್ಲದ ಕಾರಣ ನರ್ಸ್ ಇಂಜೆಕ್ಷನ್ ನೀಡಿದ್ದು, ಬಳಿಕ ಮಗು ಸಾವನ್ನಪ್ಪಿದೆ ಎಂದು ಮನೆಮಂದಿ ಆರೋಪಿಸಿದ್ದಾರೆ. ಘಟನೆಯ ಮಾಹಿತಿ ಅರಿತ ಮಾಜಿ ಶಾಸಕ ವಸಂತ ಬಂಗೇರ ಆಸ್ಪತ್ರೆಗೆ …

Read More »

ಹರ ಹರ ಶಂಭು ಗಾಯಕಿ ಫರ್ಮಾನಿ ನಾಜ್ ಸಹೋದರನ ಬರ್ಬರ ಹತ್ಯೆ

ಉತ್ತರಪ್ರದೇಶ: ವಿವಾದಿತ ಯೂಟ್ಯೂಬರ್ ಮತ್ತು ಗಾಯಕಿ ಫರ್ಮಾನಿ ನಾಜ್ ಅವರ ಸೋದರಸಂಬಂಧಿಯನ್ನು ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು 18 ವರ್ಷದ ಖುರ್ಷಿದ್ ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಕೂಲಿ ಮಾಡುತ್ತಿದ್ದ. ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮೊಹಮ್ಮದ್‌ಪುರ ಮಾಫಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶವು ರತನ್‌ಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ವ್ಯಾಪ್ತಿಗೆ ಬರುತ್ತದೆ. ವರದಿಗಳ ಪ್ರಕಾರ, ಶನಿವಾರ ರಾತ್ರಿ 7:30 ರ ಸುಮಾರಿಗೆ ಪ್ರಾರ್ಥನೆ ಬಳಿಕ ಖುರ್ಷಿದ್ ಮನೆಗೆ ಮರಳುತ್ತಿದ್ದರು. ಈ ವೇಳೆ ಸಾಲ್ವಾ ರಸ್ತೆ ಬಳಿ …

Read More »

ಸೌಜನ್ಯ ಪ್ರಕರಣ: ಜನರು ಬೊಟ್ಟು ಮಾಡುತ್ತಿರುವ ಆ ವ್ಯಕ್ತಿಗಳು ಯಾರು..!?

ಕಳೆದ 11 ವರ್ಷಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯದಲ್ಲಿ ಮತ್ತೆ ಹೋರಾಟದ ಕಿಚ್ಚು ಹೊತ್ತಿಸಿದೆ. ಆರೋಪಿಯಾಗಿದ್ದ ಸಂತೋಷ್‌ರಾವ್ ಅವರನ್ನು ಸಿಬಿಐ ಕೋರ್ಟ್ ನಿರ್ದೋಷಿ ಎಂದು ಬಿಡುಗಡೆ ಮಾಡಿದೆ. ಹಾಗಾದರೆ ಸೌಜನ್ಯಾಳನ್ನು ಕೊಂದವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗೇ ಉಳಿದಿದೆ. ಮಗಳನ್ನು ಕಳೆದುಕೊಂಡ ಕುಟುಂಬಕ್ಕೆ ಈವರೆಗೂ ನ್ಯಾಯ ಸಿಕ್ಕಿಲ್ಲ. ಮಾನಸಿಕ ಅಸ್ವಸ್ಥರನ್ನು ಈ ಕೇಸ್‌ನಲ್ಲಿ ಸಿಕ್ಕಿಸಲಾಗಿತ್ತು ಎನ್ನುವ ಆರೋಪ ಮಾಡುತ್ತಿರುವ ಜನ ಬೊಟ್ಟು ಮಾಡುತ್ತಿರುವುದು ಶ್ರೀ ಕ್ಷೇತ್ರ ಧರ್ಮಸ್ಥಳದತ್ತ ಎನ್ನುವುದು ಈಗಿನ ವಿಚಾರವಾಗಿದೆ. ಧರ್ಮಸ್ಥಳ ದೇವಸ್ಥಾನದ …

Read More »

ಕ್ಷುಲಕ ವಿಚಾರಕ್ಕೆ ಜಗಳ-ಮಹಿಳೆ ಮೇಲೆ ಮಾನಭಂಗ ಯತ್ನ; ಪ್ರಕರಣ ದಾಖಲು

ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ನೆರೆಮನೆಯ ನಿವಾಸಿಗಳ ನಡುವೆ ಜಗಳ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಬಳಬೆಟ್ಟು ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಜೈನುಲ್ ಅಬೀದ್ ಅವರ ಆಯಿಶತ್ ಮುಬೀನಾ ಅವರು ವಿಟ್ಲ‌ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಅದೇ ಕಾಂಪ್ಲೆಕ್ಸ್ ನಲ್ಲಿ ವಾಸ ಇರುವ ಆರೋಪಿಗಳಾದ ಹನ್ನತ್, ಆಕೆಯ ಸಹೋದರಿ, ಆಕೆಯ ತಾಯಿ, ಹಾಗೂ ಹನ್ನತ್ ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ. ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಕಾಂಪ್ಲೆಕ್ಸ್ ನಲ್ಲಿ ನಲ್ಲಿ ವಾಸ ಮಾಡಿಕೊಂಡಿರುವ ಮುಬೀನಾ ತನ್ನ ತವರು …

Read More »

ಜಲಪಾತಕ್ಕೆ ಬಿದ್ದ ಕಾರು: ತಂದೆ- ಮಗಳನ್ನು ರಕ್ಷಿಸಿದ ಪ್ರವಾಸಿಗರು

ಮಧ್ಯಪ್ರದೇಶ: ಇಂದೋರ್‌ನ ಲೋಧಿಯಾ ಕುಂಡ್ ಜಲಪಾತಕ್ಕೆ ಕಾರು ಬಿದ್ದ ಪರಿಣಾಮ ತಂದೆ ಮತ್ತು ಮಗಳನ್ನು ಪ್ರವಾಸಿಗರು ರಕ್ಷಿಸಿದ ಈ ಘಟನೆ ನಡೆದಿದೆ. ಇಂದೋರ್ ನಗರದಿಂದ 60 ಕಿಲೋಮೀಟರ್ ದೂರದಲ್ಲಿರುವ ಸಿಮ್ರೋಲ್‌ನಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಲಪಾತದ ಅಂಚಿನಲ್ಲಿದ್ದ ಕಾರು ನಿಲ್ಲಲು ಸಾಧ್ಯವಾಗದೆ ಜಲಪಾತಕ್ಕೆ ಬಿದ್ದಿದೆ. ಈ ಸಂದರ್ಭ ತಂದೆ ಮಗಳು ಕಾರಿನಲ್ಲಿದ್ದು, ತಂದೆ ಕಾರಿನಿಂದ ಎಸೆಯಲ್ಪಟ್ಟರೆ, ಮಗಳು ಕಾರಿನಲ್ಲೇ ಇದ್ದರು. ಚಿಕ್ಕ ಹುಡುಗಿಯ ಕಿರುಚಾಟ ಕೇಳಿ ಜಲಪಾತದ ಸಮೀಪವಿರುವ ಪ್ರವಾಸಿಯೊಬ್ಬರು ನೀರಿಗೆ ಹಾರಿ ವ್ಯಕ್ತಿಯನ್ನು ರಕ್ಷಿಸಿದರೆ, ಕಾರಿನಲ್ಲಿದ್ದ …

Read More »

ನಾನು ರಾಹುಲ್ ಗಾಂಧಿ ಅವರನ್ನು ಮದುವೆಯಾಗಲು ರೆಡಿ ಎಂದ ನಟಿ..!

ಮುಂಬೈ; ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ರಾಹುಲ್ ಗಾಂಧಿ ಅವರ ವಿವಾಹದ ಬಗ್ಗೆ ಆಗಾಗ್ಗೆ ಏನಾದರೊಂದು ಸುದ್ದಿ ಸದ್ದು ಆಗುತ್ತಲೇ ಇರುತ್ತದೆ. ಇದೀಗ ಖ್ಯಾತ ನಟಿಯೊಬ್ಬರು ನಾನು ರಾಹುಲ್‌ ಗಾಂಧಿಯವರನ್ನು ಮದುವೆಯಾಗಲು ರೆಡಿಯಾಗಿದ್ದೇನೆ ಎಂದಿದ್ದಾರೆ. ಅಂದ್ಹಾಗೆ ಆ ನಟಿ ಬೇರಾರು ಅಲ್ಲ ಶೆರ್ಲಿನ್ ಛೋಪ್ರಾ. ಅಲ್ಲದೇ ಅದಕ್ಕೊಂದು ಷರತ್ತು ಕೂಡ ಹಾಕಿದ್ದಾರೆ. ತಮ್ಮ ಸರ್ ನೇಮ್ ಛೋಪ್ರಾ ಎಂದು ಹಾಕಲು ಸಮ್ಮತಿಸಬೇಕು ಎಂದು ಹೇಳಿದ್ದಾರೆ. ಮುಂಬೈನ ಬಾಂದ್ರಾಬ್ಯಾಂಡ್‌ಸ್ಟಾಂಡ್‌ ಬೀಚ್‌ಗೆ ಇತ್ತೀಚಿಗೆ ಶೆರ್ಲಿನ್‌ ಛೋಪ್ರಾ ಬಂದಿದ್ದಾಗ ಪತ್ರಕರ್ತರು ಅವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು …

Read More »

ವಾಹನದ ಮೇಲೆ ‘ತ್ರಿವರ್ಣ ಧ್ವಜ’ ಹಾಕಿ ದೇಶಭಕ್ತಿ ಪ್ರದರ್ಶಿಸಿದ್ರೆ, ಜೈಲು ಸೇರ್ತಿರಾ ಎಚ್ಚರ

ಸ್ವಾತಂತ್ರೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಸಂದರ್ಭದಲ್ಲಿ ಜನರು ತಮ್ಮ ದೇಶಭಕ್ತಿಯನ್ನ ಪ್ರದರ್ಶಿಸಲು ವಾಹನಗಳ ಮೇಲೆ ಧ್ವಜಗಳನ್ನ ಹಾಕಲು ಪ್ರಾರಂಭಿಸಿದ್ದಾರೆ. ಆದ್ರೆ, ನಿಮ್ಮ ಈ ಹವ್ಯಾಸವು ನಿಮಗೆ ದೊಡ್ಡ ನಷ್ಟವನ್ನ ಉಂಟು ಮಾಡಬಹುದು. ಮತ್ತು ನಿಮ್ಮನ್ನ ಜೈಲಿಗೆ ಹೋಗುವಂತೆ ಮಾಡಬೋದು ಅನ್ನೋದು ನಿಮಗೆ ತಿಳಿದಿದೆಯೇ.? ಮಾರುಕಟ್ಟೆಯಲ್ಲಿ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತ್ರಿವರ್ಣ ಧ್ವಜಗಳು ಮಾರಾಟವಾಗುತ್ತಿದ್ದು, ನಿಮ್ಮ ಕಾರಿಗೆ ಹಾಕಲು ತ್ರಿವರ್ಣ ಧ್ವಜವನ್ನ ನೀವು ಖರೀದಿಸಿದ್ದರೆ, ಎಚ್ಚರಿಕೆಯಿಂದಿರಿ. ಇಲ್ಲವಾದ್ರೆ ನೀವು ಪಶ್ಚಾತ್ತಾಪ ಪಡಬೇಕಾಗಬಹುದು. ಭಾರತೀಯ ಧ್ವಜ ಸಂಹಿತೆ.! ಭಾರತೀಯ ಧ್ವಜ ಸಂಹಿತೆಯ ಪ್ರಕಾರ, ಕೆಲವು ವಿಶೇಷ …

Read More »

ಸೌಜನ್ಯ ಅತ್ಯಾಚಾರ, ಕೊಲೆಗಾರರನ್ನು ಗುಂಡು ಹೊಡೆದು ಸಾಯಿಸಿ : ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಕರೆ..!

ಮಂಗಳೂರು : ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಅಪರಾಧಿಗಳು ಯಾರು ಅಂತ ಗೊತ್ತಿದ್ರೆ, ಅವರನ್ನು ಗುಂಡು ಹೊಡೆದು ಸಾಯಿಸಿ ನನ್ನ ಬಳಿಗೆ ಬನ್ನಿ ನಾವು ರಕ್ಷಣೆ ನೀಡ್ತೇವೆಂದು  ಎಂದು ರಾಮಸೇನಾ  ಸ್ಥಾಪಕಧ್ಯಕ್ಷ  ಪ್ರಸಾದ್ ಅತ್ತಾವರ  ಕರೆ ನೀಡಿದ್ದಾರೆ. ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದ ಪ್ರಸಾದ್ ಅತ್ತಾವರ  ಸೌಜನ್ಯ ಪ್ರಕರಣದ ತನಿಖೆ ಸಂಪೂರ್ಣ ವಿಫಲವಾಗಿದೆ. ಅಮಾಯಕ ಸಂತೋಷ್ ಅನ್ನುವ ವ್ಯಕ್ತಿ 11ವರ್ಷ ಜೈಲು ಸೇರಿ ಇದೀಗ ಖುಲಾಸೆಗೊಂಡು ಹೊರ ಬಂದಿದ್ದರೂ ಅವನ ಜೀವನವೇ ನಾಶವಾಗಿದೆ. ಇವತ್ತು ಹೋರಾಟ ಪ್ರತಿಭಟನೆಯೆಂದು ಕೈಕಟ್ಟಿ …

Read More »

You cannot copy content of this page.