May 4, 2026
WhatsApp Image 2026-05-04 at 12.16.42 PM

ಕಾರವಾರ : ಹೃದಯಾಘಾತದಿಂದ 7ನೇ ತರಗತಿ ಶಾಲಾ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಜೋಯಿಡಾ ತಾಲೂಕಿನ ಚಾಪೇಲಿ – ಗವಳಿವಾಡ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಗ್ರಾಮದ ಗಂಗು ಗವಳಿ (13) ಎಂದು ಗುರುತಿಸಲಾಗಿದೆ. ಬಾಲಕಿಗೆ ಯಾವುದೇ ಕಾಯಿಲೆಯಾಗಲಿ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಾಗಲಿ ಇರಲಿಲ್ಲ. ಎಲ್ಲ ಮಕ್ಕಳಂತೆ ನಿತ್ಯ ಆಟ ಪಾಠದಲ್ಲಿ ಇರುತ್ತಿದ್ದ ಗಂಗು, ಸಾವಿಗೂ ಮುನ್ನ ದಿನಪೂರ್ತಿ ಆಟ ಆಡಿದ್ದಳು. ರಾತ್ರಿ ಊಟ ಮಾಡಿ ಮಲಗಿದವಳು ಬೆಳಿಗ್ಗೆ ಎದ್ದು ವಾಂತಿ ಮಾಡಿದ್ದಳು. ವಾಂತಿ ಮಾಡಿದ ಕೆಲವೇ ಕ್ಷಣಕ್ಕೆ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

About The Author

Leave a Reply

Your email address will not be published. Required fields are marked *

You cannot copy content of this page.