December 5, 2025
WhatsApp Image 2025-10-20 at 11.25.01 AM

ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ಕೈ ಕೊಯ್ದುಕೊಂಡು ಆತ್ನಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಪೂಜಾ ಮಿಶ್ರಾ ಎಂಬುವವರು ಲಲಿತ್ ಮಿಶ್ರಾ ಎಂಬುವವರನ್ನು ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದರು.

ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೆಲವು ವರ್ಷಗಳ ಹಿಂದೆ ಯಾವುದೇ ಕೆಲಸದ ಉದ್ದೇಶದಿಂದ ಲಲಿತ್ ಮಿಶ್ರಾ ತನ್ನ ಸೋದರಳಿಯ ಅಲೋಕ್ ಮಿಶ್ರಾನನ್ನು ಮನೆಗೆ ಕರೆಸಿಕೊಂಡಿದ್ದರು.

ಆ ಮಹಿಳೆಗಿಂತ ಅಲೋಕ್ 15 ವರ್ಷ ಚಿಕ್ಕವನು. ಅಲೋಕ್ ಹಾಗೂ ಪೂಜಾ ನಡುವೆ ಪ್ರೀತಿ ಬೆಳೆಯಿತು.ಈ ಸಂಬಂಧದ ಬಗ್ಗೆ ಲಲಿತ್​​ಗೆ ತಿಳಿಯಿತು, ಅಲೋಕ್​ನನ್ನು ಬೇರೆ ಕಡೆಗೆ ಕಳುಹಿಸಲಾಯಿತು. ಪೂಜಾ ತನ್ನ ಮಕ್ಕಳನ್ನು ಬಿಟ್ಟು ಬರೇಲಿಗೆ ಹೋದಳು, ಅಲ್ಲಿ ಅಲೋಕ್ ಹಾಗೂ ಪೂಜಾ ಸುಮಾರು ಏಳು ತಿಂಗಳು ಒಟ್ಟಿಗೆ ವಾಸಿಸುತ್ತಿದ್ದರು.

ಪೂಜಾ ಹಾಗೂ ಅಲೋಕ್ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಸೀತಾಪುರದಲ್ಲಿರುವ ತನ್ನ ಊರಿಗೆ ಮರಳಿದ್ದಾಳೆ. ಪೂಜಾ ಗ್ರಾಮಕ್ಕೆ ಬಂದಾಗ, ವಿವಾದವನ್ನು ಪರಿಹರಿಸುವ ಪ್ರಯತ್ನದಲ್ಲಿ ಅಲೋಕ್ ಹಾಗೂ ಪೂಜಾ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆಸಲಾಯಿತು.

ಅಲೋಕ್ ಇನ್ನು ಮುಂದೆ ತನ್ನೊಂದಿಗೆ ಇರಲು ಬಯಸುವುದಿಲ್ಲ ಎಂದು ಹೇಳಿದಾಗ, ಪೂಜಾ ಬ್ಲೇಡ್ ತೆಗೆದುಕೊಂಡು ಪೊಲೀಸ್ ಠಾಣೆಯೊಳಗೆ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡಳು. ಇದು ಅಲ್ಲಿದ್ದವರಲ್ಲಿ ಭಯವನ್ನು ಉಂಟುಮಾಡಿತು. ಪೂಜಾಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಗಂಭೀರ ಸ್ಥಿತಿಯಲ್ಲಿ ಲಕ್ನೋಗೆ ಕರೆದೊಯ್ಯಲಾಯಿತು.

About The Author

Leave a Reply

Your email address will not be published. Required fields are marked *

You cannot copy content of this page.