ಅಂಕೋಲಾ : ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮಂಗಳವಾರ ಮುಂಜಾನೆ ಗಂಗಾವಳಿ ನದಿ ಸಂಗಮದ ಮಂಜುಗುಣಿಯಲ್ಲಿ ಇನ್ನೊಂದು ಮಹಿಳೆಯ ಮೃತದೇಹ ಪತ್ತೆಯಾಗಿದ್ದು ಇದರಿಂದ ಒಟ್ಟು ಸಾವಿನ ಸಂಖ್ಯೆ ಇದಿಗ ಎಂಟಕ್ಕೆರಿದೆ.
ಗಂಗಾವಳಿ ನದಿ ತೀರದ ಉಲುವರೆ ಗ್ರಾಮದ ಒರ್ವ ಮಹಿಳೆ ಸಣ್ಣು ನಾಪತ್ತೆ ಆಗಿರುವ ಮಾಹಿತಿ ಇದೀಗ ಪತ್ತೆಯಾಗಿರುವ ಮೃತದೇಹ ಆಕೆಯದ್ದೇ ಎಂಬುದನ್ನು ಕುಟುಂಬದವರು ಪತ್ತೆ ಮಾಡಬೇಕಿದೆ
ಗಂಗಾವಳಿ ನದಿಯಲ್ಲಿ ಪತ್ತೆಯಾಗಿರುವ ಮೃತದೇಹದ ಕೈಯಲ್ಲಿ ಬಳೆ ಹಾಗೂ ಬಟ್ಟೆಯ ಬಣ್ಣದ ಮೂಲಕ ಮಹಿಳೆಯನ್ನು ಪತ್ತೆಹಚ್ಚುವ ಕಾರ್ಯ ನಡೆಯಬೇಕಿದೆ.