Recent Posts

ಮಂಗಳೂರು‌ ನಿವಾಸಿ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ‌ ಮೃತ್ಯು

ಬೆಂಗಳೂರು: ಮಂಗಳೂರು‌ ನಿವಾಸಿ ಬೆಂಗಳೂರಿನ ಕುಣಿಗಲ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಬಜ್ಪೆಯ ಭಾಸ್ಕರದಾಸ್ ಎಕ್ಕಾರು (65) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು-ಮಂಗಳೂರು ರಾ.ಹೆ.ಯ ಕುಣಿಗಲ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾಸ್ಕರದಾಸ್ ಗಂಭೀರವಾಗಿ ಗಾಯಗೊಂಡಿದ್ದರು.ತಕ್ಷಣ ಅವರನ್ನು ಬೆಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು‌ ಮೃತಪಟ್ಟಿದ್ದಾರೆ. ಇವರು‌ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಹಾಗೂ ಆರೆಸೆಸ್ಸ್ ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣಾ ಸಮನ್ವಯ ಪರಿಯೋಜನಾ ಪ್ರಮುಖ್ ಆಗಿ ಕೆಲಸ ಮಾಡಿದ್ದರು.

Read More »

ಬ್ರಹ್ಮಾವರ: ಡೆತ್ ನೋಟ್ ಬರೆದಿಟ್ಟು ವಿವಾಹಿತೆ ನೇಣಿಗೆ ಶರಣು

ಬ್ರಹ್ಮಾವರ: ವಿವಾಹಿತ ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿನ್ಸಿ ಶೈಜು ಥೋಮಸ್ (30) ಆತ್ಮಹತ್ಯೆ ಮಾಡಿಕೊಂಡವರು. ಇವರು ವಿವಾಹಿತರಾಗಿದ್ದು ಇವರ ಗಂಡ ಉದ್ಯೋಗದ ನಿಮಿತ್ತ ದುಬೈಯಲ್ಲಿದ್ದರು. ಇವರು ಮಗಳೊಂದಿಗೆ ಗಂಡನ ಮನೆಯಾದ ಹಂದಾಡಿ ಗ್ರಾಮದ ಬೇಳೂರುಜೆಡ್ಡು ಎಂಬಲ್ಲಿ ವಾಸವಾಗಿದ್ದು, ಅತ್ತೆ, ಮಾವ ಅದೇ ಮನೆಯ ಕೆಳ ಅಂತಸ್ತಿನಲ್ಲಿ ವಾಸವಾಗಿದ್ದರು. ಬಿನ್ಸಿ ಶೈಜು ಥೋಮಸ್ ಅವರು ಅಕ್ಟೋಬರ್ 26ರಂದು ರಾತ್ರಿ ಇಲಿ ಪಾಷಾಣ ಸೇವಿಸಿ ಡೆತ್ ನೋಟ್ ಬರೆದಿಟ್ಟು ಯಾರಿಗೂ …

Read More »

43 ಪ್ರಯಾಣಿಕರಿದ್ದ ವಿಮಾನ ಕೆರೆಗೆ ಪತನ, ಸಾವು ನೋವಿನ ಆತಂಕ

ತಾಂಜನಿಯಾ: 43 ಪ್ರಯಾಣಿಕರಿದ್ದ ವಿಮಾನವೊಂದು ತಾಂಜನಿಯಾದ ವಿಕ್ಟೋರಿಯಾ ಲೇಕ್​​ನಲ್ಲಿ ಪತನಗೊಂಡಿದೆ. ಕೆಟ್ಟ ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಬುಕೊಬಾದಲ್ಲಿರುವ ಕೆರೆಗೆ ಬಿದ್ದಿದೆ. ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದಿಂದ 100 ಮೀಟರ್ ಅಂತರದಲ್ಲಿ ಅಪಘಾತ ಸಂಭವಿಸಿದೆ. ಬುಕೊಬಾ ವಿಮಾನ ನಿಲ್ದಾಣದ ಬಳಿ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 39 ಪ್ರಯಾಣಿಕರು ಸೇರಿ 43 ಮಂದಿ ವಿಮಾನದಲ್ಲಿ ಇದ್ದರು. ಅವರಲ್ಲಿ ಇಬ್ಬರು ಪೈಲಟ್​​ಗಳು ಹಾಗೂ ಇಬ್ಬರು ಕ್ಯಾಬಿನ್ ಸಿಬ್ಬಂದಿ ಇದ್ದರು. ವಿಮಾನವು ದಾರ್​ …

Read More »

You cannot copy content of this page.