Recent Posts

ತಿರುವು ಪಡೆದುಕೊಂಡ ಸುಬ್ರಹ್ಮಣ್ಯ ಅನ್ಯಕೋಮಿನ ಪ್ರಕರಣ -ಪೊಲೀಸರ ವಿರುದ್ದವೇ ತಿರುಗಿ ಬಿದ್ದ ಹಿಂದೂ ಕಾರ್ಯಕರ್ತರು

ಅಪ್ರಾಪ್ತ ಹಿಂದೂ ಬಾಲಕಿಯನ್ನು ಭೇಟಿಯಾಗಲು ಬಂದ ಮುಸ್ಲಿಂ ಹುಡುಗನಿಗೆ ಥಳಿಸಿರುವ ಪ್ರಕರಣ ತಿರುವು ಪಡೆದುಕೊಂಡಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಥಳಿತಕ್ಕೆ ಒಳಗಾದ ಮುಸ್ಲಿಂ ಹುಡುಗ‌ ಹಾಗೂ ದೌರ್ಜನ್ಯಕ್ಕೆ ಒಳಗಾದ ಹಿಂದೂ ಹುಡುಗಿಯ ಕಡೆಯಿಂದಲೂ ದೂರು -ಪ್ರತಿದೂರು ದಾಖಲಾಗಿದೆ. ಇಂದು (ಜ.7) ಬೆಳಗ್ಗೆ ೧೦ಕ್ಕೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯೆದುರು ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಹಿಂದೂ ಕಾರ್ಯಕರ್ತರನ್ನೇ ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಠಾಣೆ ಎದುರು ಪ್ರತಿಭಟನೆಗೆ …

Read More »

ಚೆಕ್‌ ಡ್ಯಾಮ್‌ಗೆ ಪ್ರಧಾನಿ ತಾಯಿ ಹೀರಾಬೆನ್‌ ಹೆಸರು ನಾಮಕರಣ

ಗುಜರಾತ್‌: ಚೆಕ್‌ಡ್ಯಾಮ್‌ವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿ ಹೀರಾಬೆನ್‌ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಗಿರ್‌ ಗಂಗಾ ಪರಿವಾರ್ ಟ್ರಸ್ಟ್‌ ವತಿಯಿಂದ ರಾಜ್‌ಕೋಟ್‌–ಕಲವಾಡ ರಸ್ತೆಯ ವಗುಡಾಡ್‌ ಗ್ರಾಮದ ಬಳಿ ನ್ಯಾರಿ ನದಿಗೆ ₹15 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಮ್ ನಿರ್ಮಿಸಲಾಗುತ್ತಿದೆ. ತಾಯಿ ನೆನಪಿಗಾಗಿ ಹಾಗೂ ಗೌರವ ಸಲ್ಲಿಸುವ ಸದುದ್ದೇಶದಿಂದ ಚೆಕ್‌ ಡ್ಯಾಮ್‌ಗೆ ಹೀರಾಬಾ ಸ್ಮೃತಿ ಸರೋವರ ಎಂದು ಹೆಸರಿಸಲು ನಿರ್ಧರಿಸಿದ್ದೇವೆ. ಇದು ಇತರರಿಗೂ ಪ್ರೇರಣೆ ನೀಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ದಿಲೀಪ್ ಸಖಿಯಾ ತಿಳಿಸಿದ್ದಾರೆ.

Read More »

ಉಡುಪಿ: ಹಿಂದೂಗಳು ಮತಾಂತರ ವಾಗಲು ನಾವೇ ಕಾರಣ – ವಿನಯ್ ಗುರೂಜಿ ಹೀಗೆ ಹೇಳಿದ್ಯಾಕೆ..?

ಉಡುಪಿ: ದೇಶದಲ್ಲಿ ಹಿಂದುಗಳ ಮತಾಂತರ ಹೆಚ್ಚಾಗಲು ನಾವೇ ಕಾರಣ ಎಂದು ಕೊಪ್ಪದ ಗೌರಿ ಗದ್ದೆ ಆಶ್ರಮದ ಅವಧೂತ ವಿನಯ್‌ ಗುರೂಜಿ ಹೇಳಿದ್ದಾರೆ. ಉಡುಪಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆಶೀರ್ವಚನ ನೀಡಿದ ಅವರು, ಮತಾಂತರಗಳ ಹಿಂದಿನ ಕಾರಣಗಳನ್ನು ವಿಶ್ಲೇಷಿಸಿದರು. ಮತಾಂತರ ಆಗಲು ನಾವೇ ಕಾರಣ ಎಂತ ಬೇಸರ ವ್ಯಕ್ತಪಡಿಸಿದ ಅವಧೂತ ವಿನಯ್ ಗುರೂಜಿ ಅವರು, ಹಿಂದು ಧರ್ಮ ಶಾಸ್ತ್ರಗಳು ಕಳೆದು ಹೋಗಲು ನಮ್ಮೊಳಗಿನ ಮೇಲು ಕೀಳು ಎಂಬ ಭಾವನೆ ಕಾರಣ. ಎರಡು ಕಾರಣದಿಂದ ಮತಾಂತರ ಆಗುತ್ತಿದೆ. ಒಂದು ನಮ್ಮೊಳಗಿನ ಮೇಲು ಕೀಳು, ಮತ್ತೊಂದು ಬಡತನ ಎಂದರು. …

Read More »

You cannot copy content of this page.