Recent Posts

ಯುವಕನನ್ನು ಕಂಬಕ್ಕೆ ಕಟ್ಟಿ ಹಲ್ಲೆ ಪ್ರಕರಣ: ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ

ಮಂಗಳೂರು: ನಗರದ ಹೊರವಲಯದ ಮೂಲ್ಕಿ ಕೆರೆಕಾಡು ಎಂಬಲ್ಲಿ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ತೀವ್ರವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಕೆರೆಕಾಡು ಕೆಂಚನಕೆರೆ ನಿವಾಸಿಗಳಾದ ದಿವೇಶ್ ದೇವಾಡಿಗ(38), ರಾಜೇಶ್ ಹಾಗೂ ಯೋಗೇಶ್ ಕುಮಾರ್(46) ಬಂಧಿತ ಆರೋಪಿಗಳು. ಅವರನ್ನು ಬಂಧಿಸಿರುವ ಮುಲ್ಕಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಲ್ಲಾ ಮೂವರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ನಡುವೆ ಹಲ್ಲೆಗೊಳಗಾದ ಹಳೆಯಂಗಡಿ ದಾವೂದ್ ಹಕೀಂ(33) ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿದ್ದು, ಆತನನ್ನೂ ಬಂಧಿಸಲಾಗಿದೆ …

Read More »

ಬೆಳ್ತಂಗಡಿ: ತೋಟದ ಶೆಡ್‌ನಲ್ಲಿ ವ್ಯಕ್ತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ..!

ಬೆಳ್ತಂಗಡಿ: ವ್ಯಕ್ತಿಯೋರ್ವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿ ನಡೆದಿದೆ. ರಾತ್ರಿ ಶೆಡ್‌ನಲ್ಲಿ ಮಲಗಿದ್ದ ಶ್ರೀದರ್ ಮೃತದೇಹವು ಇಂದು ಬೆಳಗ್ಗೆ ತೋಟದ ಬದಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶ್ರೀಧರರಿಗೆ ಶನಿವಾರ ಸಂಜೆ ಮೂವರು ಸ್ಥಳೀಯರು ಹಲ್ಲೆ ನಡೆಸಿರುವುದನ್ನು ಸ್ಥಳೀಯರು ನೋಡಿದ್ದಾರೆ ಎನ್ನಲಾಗಿದೆ. ಬಳಿಕ ಶ್ರೀಧರ್ ತಾನು ಕೆಲಸ ಮಾಡುವ ಶೆಡ್‌ಗೆ ತೆರಳಿ ಮಲಗಿದ್ದು,ಆದರೆ ಬೆಳಗ್ಗೆ ಶ್ರೀಧರ ಶೆಡ್‌ನಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಟ ನಡೆಸಿದಾಗ ತೋಟದ ಬದಿಯಲ್ಲಿ ಶ್ರೀಧರನ ಮೃತದೇಹ ಪತ್ತೆಯಗಿತ್ತು. ತೋಟದ ಬೇಲಿ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, …

Read More »

ಹುಷಾರ್​​.. ಬೆತ್ತಲೆ ಇಮೇಜ್ ಬಂದ್ರೆ…. ಸ್ವೀಟಿ ಅಂತಾ ಭೇಟಿ ಮಾಡಿದ್ರೆ ಇನ್ನೂ ಡೇಂಜರ್..!

ಮೈಸೂರು : ಹುಷಾರ್​​.. ಬೆತ್ತಲೆ ಇಮೇಜ್ ಬಂದ್ರೆ ಡೇಂಜರ್​​​, ಹಾಯ್​​ ಅಂದ್ರೂ ಡೇಂಜರ್​​​, ಏಯ್​ ಅಂದ್ರೂ ಡೇಂಜರ್​​​. ಸ್ವೀಟಿ ಅಂತಾ ಭೇಟಿ ಮಾಡಿದ್ರೆ ಇನ್ನೂ ಡೇಂಜರ್​​​. ಹಣ ಕಿತ್ತು ಮಾನ ಹರಾಜಾಕ್ತಾರೆ ಈ ಖತರ್ನಾಕ್​ ಲೇಡಿ. ಮೈಸೂರು ಪೊಲೀಸರು ಕಿಲಾಡಿ ಲೇಡಿಯನ್ನು ಅರೆಸ್ಟ್ ಮಾಡಿದ್ದಾರೆ. ಈಕೆ ಹೆಸರು ಸವಿತಾ ಅಲಿಯಾಸ್ ಮಂಜುಳಾ ಯಾದವ್​​​. ಪಿರಿಯಾಪಟ್ಟಣದಿಂದ ಬಂದು ಮೈಸೂರಲ್ಲಿ ಸೆಟಲ್​ ಆಗಿದ್ದಾರೆ. ಕಷ್ಟಕ್ಕೆ ಅಂತಾ ಕೆಲ ದಂಪತಿ ಬಳಿ ಹಣ ಪಡೆದಿದ್ದು, ಆನಂತರ ದಂಪತಿ ನಡುವೆ ಕಲಹ ತಂದಿಡ್ತಿದ್ದರು. ಹಣ ಕೇಳಿದ್ರೆ ತನ್ನದೇ ನಗ್ನ ಪೋಟೋ ಕಳಿಸಿ …

Read More »

You cannot copy content of this page.