![file77wvbjj6fnte6dz932i1573369621](https://i0.wp.com/thrishulnews.com/wp-content/uploads/2022/11/file77wvbjj6fnte6dz932i1573369621.jpg?fit=1024%2C768&ssl=1?v=1669626786)
![](https://i0.wp.com/thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg?fit=1050%2C600&ssl=1)
ಹೆಬ್ರಿ: ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಸಂಭವಿಸಿದೆ.
![](https://i0.wp.com/thrishulnews.com/wp-content/uploads/2024/10/WhatsApp-Image-2024-10-10-at-10.47.48-AM.jpeg?fit=1134%2C1600&ssl=1)
![](https://i0.wp.com/thrishulnews.com/wp-content/uploads/2024/10/WhatsApp-Image-2024-10-31-at-11.37.20-AM.jpeg?fit=1134%2C1600&ssl=1)
![](https://i0.wp.com/thrishulnews.com/wp-content/uploads/2024/10/WhatsApp-Image-2024-10-31-at-11.37.20-AM-1.jpeg?fit=1425%2C1188&ssl=1)
![](https://i0.wp.com/thrishulnews.com/wp-content/uploads/2024/10/WhatsApp-Image-2024-10-25-at-09.34.04.jpeg?fit=1131%2C1600&ssl=1)
ಹೆಬ್ರಿಯ ಎಸ್.ಆರ್ ಪಿಯು ಕಾಲೇಜಿನ ವಿದ್ಯಾರ್ಥಿನ, ಪೆರ್ಡೂರಿನ ತೃಪ್ತಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ. ದುರದೃಷ್ಟದ ಸಂಗತಿಯೆಂದರೆ, ಕೇವಲ 10 ಮಾರ್ಕ್ ಕಡಿಮೆ ಬಂದ ಕಾರಣಕ್ಕಾಗಿ ಈ ವಿದ್ಯಾರ್ಥಿನಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಅಂಕ ಕಡಿಮೆ ಬಂದಿದ್ದಕ್ಕೆ ಕಾಲೇಜಿನ ಪ್ರಾಂಶುಪಾಲರು ಈಕೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ತೃಪ್ತಿ ಇಲ್ಲಿ ಉಚಿತ ಸೀಟ್ ಪಡೆದುಕೊಂಡಿದ್ದು ಉಚಿತ ಸೀಟ್ ಪಡೆದಿದ್ದ ಮಕ್ಕಳಿಗೆ ಮಾರ್ಕ್ ಕಡಿಮೆ ಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯಿಂದ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.