

ಚಾಮರಾಜನಗರ: ಬಸ್ ನಲ್ಲಿ ಫ್ರೀ ಪ್ರಯಾಣಕ್ಕೆ ಮಹಿಳೆಯರು ನೂಕು ನುಗ್ಗಲು ಉಂಟು ಮಾಡಿ ಬಸ್ ನ ಡೋರ್ ಕಿತ್ತು ಬಂದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಣ್ಣೆತ್ತಿನ ಅಮಾವಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟದತ್ತ ಹೊರಟ್ಟಿದ್ದರು. ಈ ವೇಳೆ ಬಸ್ ರಸ್ ಆಗಿದ್ದ ಕಾರಣ ನಾ ಮುಂದು ತಾ ಮುಂದು ಎಂದು ಬಸ್ ಹತ್ತುವಾಗ ಬಾಗಿಲನ್ನೇ ಮಹಿಳಾಮಣಿಗಳು ಮುರಿದು ಹಾಕಿದ್ದಾರೆ.ಏಕಾಏಕಿ ಬಸ್ ಡೋರ್ ಮುರಿದು ಬಂದ ಕಾರಣ ಬಸ್ ಕಂಡಕ್ಟರ್ ದಿಕ್ಕು ತೋಚದಾಗಿದ್ದಾರೆ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲಾಗಿವೆ.