ಗಂಡ ವಿದೇಶದಲ್ಲಿ ಕೆಲಸ, ಹೆಂಡತಿ ಪಕ್ಕದ ಮನೆಯವನ ಜೋತೆ ಸರಸ, ತನ್ನ ಮೂರು ಮಕ್ಕಳಿಗೆ ಇಲಿ ಪಾ’ಷಾಣ ಕೊಟ್ಟ ಪಾಪಿ ತಾಯಿ…!

ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿರುವಂತಹ ಒಂದು ಘಟನೆಯ ಕುರಿತಂತೆ ಇಂದಿನ ಲೇಖನಿಯಲಿ ನಿಮಗೆ ಹೇಳಲು ಹೊರಟಿದ್ದೇವೆ. ರಾಘವಾನಂದಂ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ರಂಜಿತಾ ಎನ್ನುವವರನ್ನು ಮದುವೆಯಾಗಿದ್ದು ದಂಪತಿಗೆ ಮೂರು ಮಕ್ಕಳಿದ್ದರು. ಅವರ ಮಕ್ಕಳಾಗಿರುವ ಭಾರ್ಗವಿ ಹಾಗೂ ಯುವರಾಜ ಮನೆಯ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಅರಿಯದಂತೆ ಇಲಿ ಪಾ’ಷಾಣ ಸೇವಿಸಿ ಮರಣ ಹೊಂದಿದ್ದರು ಆದರೆ ಒಬ್ಬ ಮಗ ಮಾತ್ರ ಬದುಕು ಉಳಿದಿದ್ದ.

ಈ ಕುರಿತಂತೆ ತಾಯಿ ರಂಜಿತಾ ನನ್ನ ಮಕ್ಕಳಿಗೆ ಬಿಸ್ಕೆಟ್ ನಲ್ಲಿ ಯಾರು ಬೇಕು ಅಂತಾನೆ ಭಾಷಣವನ್ನು ಹಾಕಿ ಮುಗಿಸಿದ್ದಾರೆ ಎಂಬುದಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ರಾಘವಾನಂದಂ ಮಕ್ಕಳ ಸಾವಿನ ಸುದ್ದಿ ತಿಳಿದು ವಿದೇಶದಿಂದ ಓಡಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಉಳಿದಿರುವಂತಹ ಕೃಪಾಲನನ್ನು ಕೇಳಿದಾಗ ತಾಯಿ ರಂಜಿತಾಳೆ ಆ ಬಿಸ್ಕೆಟ್ ಅನ್ನು ಮಕ್ಕಳಿಗೆ ತಿನ್ನಲು ನೀಡಿದಳು ಎಂಬುದಾಗಿ ತಿಳಿದುಬಂದಿದೆ.

ಈ ಘಟನೆ ನಡೆದಿದ್ದು 2016ರಲ್ಲಿ. ರಾಘವನಂದಂ ದೂರನ್ನು ದಾಖಲಿಸಿದರೂ ಕೂಡ ಪೊಲೀಸ್ ಇಲಾಖೆ ಇದರ ಕುರಿತಂತೆ ಯಾವುದೇ ರೀತಿಯಲ್ಲಿ ಗಂಭೀರವಾಗಿ ವಿಚಾರಣೆಯನ್ನು ನಡೆಸಿರಲಿಲ್ಲ. ಇದೇ ವಿಚಾರವಾಗಿ ಹಿರಿಯ ಪೊಲೀಸ್ ಅಧಿಕಾರಿ ಆಗಿರುವ ಮಣಿವಣ್ಣನ್ ಅವರು ಕೂಡ ಈ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ರಾಘವಾನಂದಂ ಅವರ ಪತ್ನಿ ರಂಜಿತ ಹಾಗೂ ಕಲ್ಯಾಣ್ ಕುಮಾರ್ ಅವರನ್ನು ಇದೇ ಗುರುವಾರ ಬಂಧಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇವರಿಬ್ಬರನ್ನು ಕೂರಿಸಿಕೊಂಡು ತೀವ್ರವಾಗಿ ಪ್ರಕರಣದ ಕುರಿತಂತೆ ವಿಚಾರಣೆ ನಡೆಸಿದಾಗ ಸತ್ಯ ಕೊನೆಗೂ ಹೊರ ಬಂದಿದೆ. ಹೌದು ಗೆಳೆಯರೇ ರಾಘವನಂದಂ ಹಾಗೂ ಆ ಮಕ್ಕಳ ತಾಯಿಯಾಗಿರುವ ರಂಜಿತಾ ಅವರಿಗೆ ಕಲ್ಯಾಣ್ ಕುಮಾರ್ ಅವರ ಜೊತೆಗೆ ಬೇಡದ ಸಂಬಂಧ ಇತ್ತು. ಇದಕ್ಕೆ ಅವರ ಮಕ್ಕಳು ಅಡ್ಡಿ ಬರುತ್ತಿದ್ದ ಹಿನಾಲೆಯಲ್ಲಿ ರಂಜಿತ 2016ರ ಅಕ್ಟೋಬರ್ 10 ನೇ ತಾರೀಖಿನಂದು ತಮ್ಮ ಮೂರು ಮಕ್ಕಳಿಗೂ ಬಿಸ್ಕೆಟ್ ನಲ್ಲಿ ಇಲಿ ಪಾಷಾ’ಣ ನೀಡಿ ಮುಗಿಸಲು ಪ್ರಯತ್ನಪಟ್ಟಿದ್ದರು. ಆದರೆ ಸರಿಯಾದ ಸಮಯಕ್ಕೆ ಕೃಪಾಲನ್ ಗೆ ಚಿಕಿತ್ಸೆ ಸಿಕ್ಕಿದ್ದರಿಂದ ಆತ ಉಳಿದುಕೊಂಡಿದ್ದ. ಕೊನೆಗೂ ಈ ಪ್ರಕರಣದ ಸತ್ಯಾಂಶ ಹೊರಬಂದಿದ್ದು ಆರೋಪಿಗಳನ್ನು ಕಂಬಿಯ ಹಿಂದೆ ಹಾಕಿದ್ದಾರೆ. ಒಬ್ಬ ತಾಯಿಯಾದವಳು ಹೀಗೆ ಮಾಡುತ್ತಾಳೆ ಎಂಬುದನ್ನು ಯಾರೂ ಕೂಡ ಕನಸಿನಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ.

Check Also

ಮಂಗಳೂರು : ತುಳುನಾಡ್ ಟ್ರಸ್ಟ್ (ರಿ) ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಮಂಗಳೂರು : ಇಂದು ನಗರದ ಕೆಪಿಟಿಯ ಕದ್ರಿ ಬಳಿ ಇರುವ ವೀರ ಯೋಧರ ಸ್ಮಾರಕ ಭವನದಲ್ಲಿ ನಮ್ಮ ತುಳುನಾಡ್ ಟ್ರಸ್ಟ್ …

Leave a Reply

Your email address will not be published. Required fields are marked *

You cannot copy content of this page.